Poem

ದೇವರನ್ನಾಗಿಸಿದರು..

ಕೆತ್ತಿದರು ನನ್ನನ್ನು
ದೇವರ ಮಾಡುವೆನೆಂದು
ಹಾಲು ಜೇನಿನ ಸುರಿಮಳೆಯಿನ್ನೆಂದು
ಹೇಳತೀರದ ಸೌಬಾಗ್ಯವೆಂದು!!

ಬದುಕಿದ್ದೆ ಅದು ಹೇಗೋ
ಕಾಣದ ಮೂಲೆಯಲಿ
ಹಾವು ಹಪ್ಪಟೆಗಳ ಸೂರಾಗಿ
ಹುಲ್ಲು ಗಿಡಗಂಟೆಗಳ ಬುಡವಾಗಿ!

ಬಂದರು ಎಲ್ಲಿಂದಲೋ!
ಸಲಾಕೆಯಲಿ ಮೈಯ ಮೀಟಿ ಎತ್ತಿ
ಸರಪಳಿಯಲಿ ಸುತ್ತ ಸುತ್ತಿ
ಎಳೆದೊಯ್ದರೊ ನನ್ನ ಕಾಣದೂರಿಗೆ

ದೇವರನ್ನಾಗಿಸುವ ಅವರವರ ಹಂಬಲಕೆ
ಕೆತ್ತಿ ಹಾಕಿದರೋ ನನ್ನೆಲ್ಲ ಕನಸುಗಳ
ಮೆಟ್ಟಿಲಾಗಬೇಡವೇಂದು ಅಡಿಗಡಿಗೆ ಬಡಬಡಿಸಿ
ದೇವರನ್ನಾಗಿಸಿದರು ನನ್ನ ಎಲ್ಲರಿಂದ ದೂರ ನಿಲ್ಲಿಸಿ!!

By: ವಿನಯ ಜೋಯಿಸ್

Comments[1] Likes[30] Shares[0]

Submit Your Comment

Latest Comments

Suresh berike
Jul 06,2020

Good poem