ಕಾಡ ಬಯಲೋಳು ನೀರವ ಮೌನದಲಿ ಭಾವಗಳುದುರಿಸಿ ಧ್ರುಢ ಚಿತ್ತದಿ ನಿಂತಿದೆ ಸಾವಿರ ಸಂವತ್ಸರಕೆ ಸಾಕ್ಷಿಯಾಗುತಲಿ ಹಸಿರಿಲ್ಲದೆಯು ಕಂಗೊಳಿಸುತಿದೆ ಒಣಮರವೊಂದು
ಚಿಗುರೆಲೆಯ ನಗುವಿಲ್ಲ ತರಗೆಲೆಯ ಸದ್ದಿಲ್ಲ ಹೂವ ಅರಳಿಸಿ ಹಣ್ಣಾಗಿಸುವ ಬಯಕೆಯು ಇಲ್ಲ ಒಡಲ ಬಾಯಾರಿಕೆಗೆ ಮಳೆ ಹನಿಯ ಬೇಡಿಲ್ಲ ಸಮಚಿತ್ತದಿ ನಿಂತಿದೆ ಒಣಮರವೊಂದು
ಬಳಲಿ ಬಂದ ಜೀವಕ್ಕೆ ಆಸರೆಯ ನೀಡಿಲ್ಲ ನೆರೆ ಮರದ ಗೋಳನ್ನು ಕಿವಿಗೊಟ್ಟು ಕೇಳಿಲ್ಲ ಹರಿಯುವ ಬಳ್ಳಿಯನು ಬರಸೆಳೆದು ಅಪ್ಪಿಲ್ಲ ಬಾಗದೆಯೆ ಬೀಗುತಿದೆ ಒಣಮರವೊಂದು
ನೋವು ನಲಿವುಗಳೆನೇಂಬುದೇ ಅರಿತಿಲ್ಲ ಸಾವನ್ನು ಆಹ್ವಾನಿಸಲಿಲ್ಲ ಬದುಕನ್ನು ಪ್ರೀತಿಸಲೂ ಇಲ್ಲ ತನ್ನದೊಂದು ಬಾಳೆಂದು ಮರುಗಿ ಒಣಗಿದ್ದಲ್ಲ ಬೇರೂರದೆಯೇ ಭದ್ರವಾಗಿದೆ ಒಣಮರವೊಂದು......
No comments are available!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
No comments are available!