ಒಳಗೊಂದು ಉಸಿರು ಝೇಂಕರಿಸಿದೆ ಹೊರಗಿನ ವಿಪ್ಲವಗಳ ಗೊಡವೆಯಾಚೆ ಒಪ್ಪಿದೆ, ಅಪ್ಪಿದೆ, ಬೆಸುಗೆಯೊಂದು ಹೆಣೆದಿದೆ ನವಮಾಸದ ಕೊನೆಗೆ ಕಡಿದರೂ ಉಳಿವ ಹಾಗೆ..... ಎಲ್ಲಿಯ ಅಂಡವೋ ಯಾರ ಬೀಜವೋ ಸಮಾಗಮಕ್ಕೆ, ಸಖ್ಯಕೆ, ಸಂಗಮಕೆ ಆಸರೆಯಾದ ನೆಪ ಮಾತ್ರ...... ನನ್ನ ಹಮ್ಮು! ಉರುಳುತುರುಳುತ ದಿನಚಕ್ರ, ಗಟ್ಟಿಯಾಗುತ್ತಿದೆಯೇ ಬಂಧ? ದೂರವಾಗುತ್ತಿದೆಯೇ ಸಂ-ಬಂಧ..... ನನ್ನೊಡಲನೇ ಬಸಿದ ನನ್ನದಲ್ಲದ ಸೇತುಬಂಧ...! ಒಂದು ಹುಣ್ಣಿಮೆಯ ಮುಂಜಾವು, ಅಮವಾಸ್ಯೆಯ ಕರಿನೆರಳು .........................ಚಂದಿರನೇ ಕಾಣೆ! ಸಾಕ್ಷಿಗೆ..... ... ಒಸರುತಲೇ ಚುಚ್ಚುತ್ತಿರುವ ಮೊಲೆತೊಟ್ಟು ಮಾತ್ರ! ನನ್ನೊಳಗಿನ ಜೀವದ ನೆನಪಿನಾ ಹೆಣಿಗೆ ಚದುರಿದೆ, ಅಪ್ಪಯ್ಯನ ಅನವರತ ಕೆಮ್ಮಿನಾ ಗಾನಕೆ! ಚದುರಿರುವುದರ ಚದುರಲು ಬಿಟ್ಟು, ನೆಟ್ಟಿರುವೆ ಚಿತ್ತ, ಹೊಸದರತ್ತ; ನೆನಪುಗಳ ಹೊಸಕುವತ್ತ! ಹಾಸಲ್ಲೇ ಉಸುರಿ, ಕಣ್ಣಲ್ಲೇ ಜೀವ ಹಿಡಿದಿರುವ ಅಮ್ಮನ ಸುಕ್ಕುಗಳಾಳದಲಿ ಹುಡುಕುತಿರುವೆ ‘ತೃಪ್ತ ಭಾವ’ ಒಂದು ಹಿಡಿ ಅಕ್ಕಿಯಾಸರೆಯಲೆ, ಉಳಿದಿರುವ ಜೀವ! ಒಂದು ಚಿಗುರನು ಚಿಗುರಿ, ಕಸಿಮಾಡಿ, ಜೀವ ಕೊಟ್ಟು ಮತ್ತೆ ನೇಪಥ್ಯಕೆ ಕಳಿಸಿ ನನಗೆ ಜೀವ ಕೊಟ್ಟ ಎರಡು ಜೀವಗಳ ಉಳಿಸಿ, ಸಾಧಿಸಿದ್ದು, ದಿನಕ್ಕೆ ಒಂದು ಹಿಡಿ ಅಕ್ಕಿ! ಕನಸು ಮನಸುಗಳ ಹೊಸಕಿ!
Good one my dear niece .. Proud of you... keep it up... many more to come
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Good one Akshaya 👌👍
Jul 06,2020Good one my dear niece .. Proud of you... keep it up... many more to come