ಸೆಳೆವ-ತುಳಿವ ಮಾತ ಕಂಪಕೇಳಿ ಮನದಿ-ಸುಳಿವ ಬೀಭತ್ಸ ರೌದ್ರ ಕಾಳಿ ಉದ್ದರಿಸಲು ಬಂದಿಹಳು ಒಮ್ಮೆ ತಾಳಿ ಸಾವದಾನ...ಸಾವದಾನ..ಪರಮಪದವಗಾಣ
ಹೆಂಗಿದ್ದರೇನು ನಿನ್ನಾತ್ಮನೊಪ್ಪಿದ ನಡೆ-ನುಡಿಯಲಿ ಬಾಳ್ ಎಂದಿಗೂ ನಡೆಯದು ನರನ ಸಿದ್ದಸೂತ್ರದಲಿ ಬರುವ ಭಾವ-ಭವಣೆ ನೀ ಹಿಡಿವ ತೂಕದಲಿ ಸಾವದಾನ...ಸಾವದಾನ..ಎದುರಿನವನು ಮನುಜಕಾಣ
ನಿನ್ನನರಿಯದೇ ನೀನು ಪರರಿಗೇನು ಹೇಳುವೆ ನೀ ಕಂಡ ಚುಕ್ಕಿ ಸೂರ್ಯನೆಂದು ಸಾರುವೆ ಕಣದಗಲ ಕಣ್ಣಲಿ ವಿಶ್ವದೃಷ್ಠಿಯ ತೂಕವೇ ಸಾವದಾನ...ಸಾವದಾನ...ಒಮ್ಮೆ ಮನಸತಿಳಿಗಾಣ
ಲೋಕಕಂಜಿ ಬದುಕುವುದೊಂದು ಬಾಳೇನು ಹೊತ್-ಗಂಜಿ ಕಾಣದಿರಲು ಬರುವರೇನು ಭ್ರಮೆ-ಭ್ರಾಂತಿಗೆ ಪದರಿದ ನಿನ್ನ ನುಡಿಯೇನು ಸಾವದಾನ...ಸಾವದಾನ...ತೆರೆದೊಮ್ಮೆ ಲೋಕಕಾಣ
ಬಿದ್ದು-ಬಾಳುವ ಗೆದ್ದು -ಆಳುವ ತುಡಿತದಲಿ ಸಿಡಿವ ಜ್ವಾಲೆಯೆ ಜಳಕೆ ಬಾಡದಿರಲಿ ನಿನ್ನಲ್ಲಿರಳಿದ ನಿರ್ಮಲ ಹೂಮನದ ಜಗಲಿ ಸಾವದಾನ...ಸಾವದಾನ...ಪ್ರಯೋಗತ್ಮಕ ಬದುಕಕಾಣ
ತಾಳ್ಮೆ ಹಾಗೂ ಜೀವನದ ಮೌಲ್ಯಗಳನ್ನು ಸುಂದರವಾಗಿ ನಿಮ್ಮ ಸಾಲುಗಳಲ್ಲೆ ಬಣ್ಣಿಸಿದ್ದೀರಿ 👏
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
ಸುಷ್ಮಾ ಬಿ. ಎಸ್.
Jul 08,2020ತಾಳ್ಮೆ ಹಾಗೂ ಜೀವನದ ಮೌಲ್ಯಗಳನ್ನು ಸುಂದರವಾಗಿ ನಿಮ್ಮ ಸಾಲುಗಳಲ್ಲೆ ಬಣ್ಣಿಸಿದ್ದೀರಿ 👏