Story/Poem

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕ.ಸಾ.ಪದಿಂದ 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರ ಪ್ರಕಟಿತ ಕೃತಿಗಳು ‘ಹನ್ನೆರಡು ದಡೆ ಬೆಲ್ಲ’(ಕವನ ಸಂಕಲನ-2013), ‘ಹಾಲಕ್ಕಿ ಒಕ್ಕಲಿಗರು(ಜನಾಂಗೀಯ ಬರಹ-2013), ‘ಮಧುರ ಚೆನ್ನ(ವ್ಯಕ್ತಿ ಪರಿಚಯ-2014), ‘ಕೋಳ್ಗಂಬ (ಕವನ ಸಂಕಲನ-2016)’

More About Author

Story/Poem

ಸಿಕ್ಕಿದ್ದಂತೂ ಖರೆ

ಕನಸ್ಸೆಲ್ಲ ಈಗೀಗ ಬೀಳುವುದೆ ಇಲ್ಲ ಐವತ್ತರ ಹೊಸ್ತಿಲಲಿ ಬಿದ್ದರೂ ಅತ್ತಿತ್ತ ಹೋಗದ ಹೆಳವ ಕುದುರೆಯ ರಾಜಕುಮಾರ ಬಂದಂತೆ ಸಿಂಡ್ರೇಲಾ ಡ್ರೆಸಿನಲ್ಲಿ ಇದ್ದವಳ ಕೈ ಹಿಡಿದು ಕುದುರೆ ಏರುವಾಗಲೇ.... ಮೊಣಕಾಲು ಜಗ್ಗಿ ಕಸು ಹಿಡಿದು ನೋವು ಎಂದನಷ್ಟೇ... ಎಚ್ಚರ ತಪ್ಪಿ ...ಎದ್ದಾಗ ಮುಲಾಮು...

Read More...

ಅತೃಪ್ತ ಬೇರು

ಅವಳ ಕವನದಲ್ಲೆಲ್ಲಾ ಅವನೇ ಇತ್ತೀಚಿಗೆ..ಹಿಂದೆ..ಮುಂದೆಯೂ.. ನಡೆದ ಮುರ್ಕಿಯಲ್ಲೆಲ್ಲ ಎದ್ದ ಮಾತು ಕೆಲವಂತೂ ನೇರಾನೇರ ಹಿತೈಷಿಗಳು ಅವರು ಮುಖವಾಡವಿಲ್ಲದವರಂತೆ ಅವರೇ ಹೇಳಿದ್ದು. ಏನಾದರೂ ಇದ್ದರೆ ಹೇಳು ಸಹಾಯ ಮಾಡುವೆ ಅದೇ ಅವನ ಬಗ್ಗೆ ಕವಿತೆಯಲ್ಲಿ ಕಂಡವನು ಒಳ್ಳೆಯವನೋ...ಕ...

Read More...