ನೋಡ ಬಂದೆನು ನಾ ಸವದತ್ತಿಯನು
ಉಧೋ ಎಂದು ಏರಿದೆನು ಗುಡ್ಡವನು
ಶಕ್ತಿ ದೇವತೆ ನೀ ಪವಾಡ ಮಾತೇ!
ರೇಣುಕಾ ದೇವಿ ನಿನಗೆ ನಮೋಸ್ತುತೇ.
ರಾಜಕುಮಾರಿ ನೀ ಜಮದಗ್ನಿ ಲಗ್ನವಾದೆ
ವೈಭೋಗ ತ್ಯಜಿಸಿ, ಕಷ್ಟವನು ಸಹಿಸಿದೆ
ಒಮ್ಮೆ ಪರಶುರಾಮನಿಂದ ಹತ್ಯೆಯಾದೆ
ಪತಿಯಿಂದ ಮತ್ತೆ ಜೀವ ...
ನದಿಯಂತೆ ಭೋರ್ಗರೆದು
ಹರಿದಿದ್ದಲ್ಲ ನನ್ನ ಕವಿತೆ...!
ಎಂದೂ ಬತ್ತದ
ಸಣ್ಣದೊಂದು ಒರತೆ...!!
ಹೊಲಿಗೆ ಯಂತ್ರದಂತೆ
ಯಾoತ್ರಿಕವಾಗಿ ಹೊಲೆದದ್ದಲ್ಲ...
ನನ್ನ ಕವಿತೆ
ಸಣ್ಣ ಸೂಜಿಯಲಿ
ಬೆಸುಗೆಯ ದಾರ ಹಾಕಿ
ಕಂಗಳ ಒತ್ತಿ ಹಿಡಿದು
ಮೆಲ್ಲಗೆ ಹರಿದ ಮನಸುಗಳ
ಹೊಲಿದ ಕವಿತೆ...ಒಲಿದ ಕವಿತೆ...