Story/Poem

ಚಿಂತಾಮಣಿ ಕೊಡ್ಲೆಕೆರೆ

ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು.  ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. 

More About Author

Story/Poem

ಯಮುನಾ ನದಿ ಎಂದಿನಂತೆ

ಯಮುನಾ ನದಿ ಎಂದಿನಂತೆ ಹರಿಯುತಿರುವುದು ಮಳೆಯೂ ಮತ್ತೆ ಅಂದಿನಂತೆ ಸುರಿಯುತಿರುವುದು ಇಂದು ರಾತ್ರಿ ಕೃಷ್ಣ ಮತ್ತೆ ಹುಟ್ಟಿ ಬರುವನೆ? ವಸುದೇವನು ಬುಟ್ಟಿಯಲ್ಲಿ ಹೊತ್ತುತರುವನೆ? ಅಂದಿನಂತೆ ಈ ರಾತ್ರಿಯೂ ಕಾರುಗತ್ತಲು ಮಳೆಯ ಸದ್ದೆ ತುಂಬಿರುವುದು ಸುತ್ತಮುತ್ತಲು ಮಳೆಯೇನೂ ದೊಡ್ಡದಲ...

Read More...