Story/Poem

ಡಿ.ಓ. ಸದಾಶಿವ (ಸಂಕಲ್ಪ)

`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್‌‌ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ. 

More About Author

Story/Poem

ಮಾಂಗಲ್ಯ ಕಳಚಿದಾಗ

ಮೋಡವೇ ಚಲಿಸದೆ ನಿಂತಿರುವೆ ದಿನಕರ ನಿಧಾನವಾಗಿ ಚಲಿಸುತ್ತಿರುವೆ ಸರಿಯದು ಸಮಯ, ಕಳೆಯದು ಕಾಲ ಗಾದೆಯೊಳಗಿನ ತತ್ತ್ವ, ಅರಿಯಿತು ಸತ್ವ ಬೀಸುವ ಗಾಳಿ ಕೆನ್ನೆಯ ಸೋಕಿದಾಗ ನಿನ್ನಾಸೆಯ ಹೊತ್ತು ಹೃದಯದಲ್ಲಿ ಆವೇಗ ಉಕ್ಕುತ್ತಿದೆ ಜೀವನದಿಯಂತೆ ಕಣ್ಣೀರು ಜೊತೆಯಾಗಿದೆ ಭವಿಷ್ಯ ನೆನೆದು ಬಂದಂತಹ...

Read More...