Story/Poem

ಎನ್‌.ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತ, ಕವಿ ಎನ್. ರವಿಕುಮಾರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತಂದೆ- ನಾಗಯ್ಯ, ತಾಯಿ- ಗಂಗಮ್ಮ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಹಲವು ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ರವಿಕುಮಾರ್ ಸದ್ಯ ಶಿವಮೊಗ್ಗ ಟೆಲೆಕ್ಸ್ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

More About Author

Story/Poem

ಬಿಡುವಿದ್ದರೆ ಕೇಳಿಸಿಕೊಳ್ಳಿ

ಮೋಟು ಗೋಡೆಯ ಮೇಲೆ ಕುರುಡು ದೀಪವೊಂದು ಅಪರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅಂಗಾತ ಬಿದ್ದ ಹಸಿವ ಕಂಡು ಮಾಯಕಾರನ ಬೆಳಗು ನಿರಿಕಿಸಿ ಇಣುಕಿದೆ ನುಜ್ಜು ಗುಜ್ಜಾದ ಮಣ್ಣ ನೆಲದಲ್ಲಿ ರಂಗೋಲಿ ಸತ್ತು ಮಲಗಿದೆ ಬೆಳಕಲ್ಲ ಅದು ಮತ್ತಾದೇ ಉರಿ ಧಗೆ ಕೆರೆಯ ಪಕ್ಕೆಯ ತೋಪಿನಲ...

Read More...

‘ಕತ್ತಲ ಕಾವ್ಯ’ ಹಾಗೂ ‘ಪ್ರೇಮ ಮತ್ತು ಯುದ್ಧ’

ನಮ್ಮ ನಡುವಿನ ಸೃಜನಶೀಲ ಕವಿ ಎನ್. ರವಿಕುಮಾರ್ ಟೆಲೆಕ್ಸ್ ಅವರ ಎರಡು ಕವಿತೆಗಳು ನಿಮ್ಮ ಓದಿಗಾಗಿ ‘ಕತ್ತಲ ಕಾವ್ಯ’ ಫಕೀರನ ತಂಬೂರಿಯ ತಂತಿಯಲ್ಲಿ ಅವಳು ಸುಖಿಸುತ್ತಿದ್ದಾಳೆ ತಂತು ತಂತಿಗೂ ತಾಗುವ ಬೆರಳ ಸ್ಪರ್ಶಕೆ ನಾದಗೊಂಡು ನುಲಿಯುತ್ತಾಳೆ ಅಸಂಖ್ಯಾತ ನೋವುಗಳ ಮಡಿ...

Read More...

ನಿನಗೆ ಶರಣೆಂಬೆ ಗುರುವೆ

ಶತಮಾನಗಳ ಸತ್ತ ನಾಲಿಗೆಗಳಿಗೆ ಅಕ್ಷರದ ಅಮೃತವುಣಿಸಿದ ಗುರುವ ದನಿಯ ಆಲಿಸಿ ಧರ್ಮ ಕೇಡಿಗೆ ಜ್ಞಾನದ ಮದ್ದು ಅರೆದ ಜಾತಿ ಬೇಲಿಗೆ ಬಯಲ ಬೆಳಕ ನೀಯ್ಯ್ದ ದಣಿವರಿಯದ ಹಣತೆ ನಾಲಿಗೆಗೆ ನುಡಿ ತಂದ ತಂದೆ ಗುಲಾಮಗಿರಿಗೆ ಬಿಡುಗಡೆಯನಿತ್ತ ವಿಮೋಚಕ ತೇಯ್ದ ಬದುಕು ತೇರಾಯಿತು ಬಿತ್ತ ...

Read More...

ದೇವ ಪುಷ್ಪದ ಕರುಳ ಹಾಡು

ಮತ್ತೆ ದೀಪಗಳು ಹೊತ್ತಿಕೊಂಡವು ಮುಂಬಾಗಿಲ ಸಜ್ಜೆಗೆ  ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ತೂಗು ಬಿಡಲಾಗಿದೆ ಝಗಮಗಿಸುವಂತೆ ಮಲ್ಲಿಗೆ ಹೂವು ದಂಡೆಗಳು ಕೋಣೆ ಸೇರಿಕೊಂಡಿವೆ ಕತ್ತಲನ್ನು ಉನ್ಮತ್ತಿಸುವಂತೆ  ಮಂದ ಬೆಳಕು .. ನಾನಿನ್ನೂ ರೆಡಿಯಾಗಿಲ್ಲ. ಹಜಾರದಲ್ಲಿ ಸಾಲು ನಿ...

Read More...