Story/Poem

ವಾಣಿ ಭಂಡಾರಿ

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ,  ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.

More About Author

Story/Poem

ಕವಿಯಾಗಿಸಿತು

ಅವನ ಪ್ರೀತಿ ಮುಂದೆ ಎಲ್ಲ ಸೊನ್ನೆ ಸೊನ್ನೆ ಬದುಕಿನ ಸುತ್ತ ಅವನದೆ ಹಾಡು ಬಯಲು ಬೆರಗಾಯಿತು. ಮೌನ ಮಾತಾಗಿ ಕಡಲಾಯಿತು ಹನಿಧಾರೆಗಳೆಲ್ಲ ಮುತ್ತಾಗಿ ಮಾತಾದವು. ತುಂಬಿದೆದೆಯೊಳಗೆ ನಿತ್ಯ ಮೌನ ಹೊತ್ತು ಬಿತ್ತಿದ ಮಾತಿನ ಕಲರವದ ನಿನಾದ. ಅವನ ಇಣುಕು ನೋಟ ಮುಗುಳುನಗೆ ಬೆಳದಿಂಗಳೂಟ ...

Read More...

ಬದಲಾಗದ ಅವಳು

ಅವಳು ಬದಲಾಗದವಳು ಅವಳು ಅವಳೆ ಅವಳೊಳಗಿನ ಅವಳಿಗೆ ಅವಳೆ ಸದಾ ಕೂಸು ತಾಯಿ ತಂದೆ ಬಂಧುಬಳಗ ಎಲ್ಲ ಅವಳದೆ ರೂಪ ಕನ್ನಡಿ ನಕ್ಕರೂ ಬಿಂಬದ ಭಾವವೆಲ್ಲ ತನ್ನದೆಂದೇ ಬೀಗುವ ಅವಳಿಗೆ ಅವಳೇ ಗೆಳತಿ. ಮನದೊಳಗಿನ‌ ಭಾವಗಳಿಗೆ ಅವಳದೆ ರೂಪ‌ ಲಯ ಸ್ವರ ತಂತಿಯ ಬೀಗುಮಾನ ಸ್ವರಮಾಲೆ ...

Read More...