ಕಾವ್ಯಶ್ರೀ ಮಹಾಗಾಂವಕರ್
ಹಿರಿಯ ಲೇಖಕಿ, ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ್ ಹುಟ್ಟೂರು ಶಿವಮೊಗ್ಗ. ಇವರು ಬರೆದಿರುವ ಕಥೆಗಳಿಗೆ ಗುಲ್ಬರ್ಗ ವಿಶ್ವವಿದ್ಯಾಯಲಯವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಬರೆದಿರುವ ಪ್ರಮುಖ ಕಾದಂಬರಿ ’ಪ್ರೇಮಕಾವ್ಯ’ ಹಾಗೂ ’ಬೆಳಕಿನೆಡೆಗೆ’. ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ’ಕವನಗಳಲ್ಲಿ ಸದಾ ಹೊಸತನವಿದ್ದು ತೀವ್ರವಾದ ಅಭಿವ್ಯಕ್ತಿಯ ಸಂಕೇತವಾಗಬೇಕು’ ಎನ್ನುವ ಅವರು ಕಾವ್ಯ ರಚನೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಅನೇಕ ಜಿಲ್ಲಾ ಮಟ್ಟದಲ್ಲಿ ಕವನ ವಾಚಿಸಿದ್ದಾರೆ.