ಅಟ್ಟಳೆನಾಡಿನ ಅಣಿ ಮುತ್ತುಗಳು

Author : ರಘುಶಂಖ ಭಾತಂಬ್ರಾ

Pages 176

₹ 140.00




Year of Publication: 2013
Published by: ವಚನ ಚೇತನ ಪ್ರಕಾಶನ
Address: ಮುಕ್ತಿಧಾಮ ರಸ್ತೆ, ಮಾಧವನಗರ ಬೀದರ್‌-585402

Synopsys

‘ಅಟ್ಟಳೆನಾಡಿನ ಅಣಿ ಮುತ್ತುಗಳು’ ಕೃತಿಯು 13 ಪ್ರಬಂಧಗಳ ಸಂಕಲನ. ಇಲ್ಲಿನ ಪ್ರಬಂಧಗಳು ಬೀದರ್‌ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಲೋಕಜೀವನದ ಮೇಲೆ ‍ಬೆಳಕು ಚೆಲ್ಲುತ್ತವೆ.

ಶಿವಯೋಗೀಶ್ವರ ಸ್ವಾಮೀಜಿ, ಡಾ. ಬಸವಲಿಂಗ ಪಟ್ಟದ್ದೇವರು,  ಶಿವಾನಂದ ಸ್ವಾಮೀಜಿ ನಾಡಿನ ಆಧ್ಯಾತ್ಮಿಕ ಚೇತನಗಳು. ಪ್ರಭುರಾವ ಕಂಬಳಿವಾಲೆ ಕರ್ನಾಟಕ ಏಕೀಕರಣದ ಮುಂಚೂಣಿಯಲ್ಲಿ ಇದ್ದವರು. ಭೀಮಣ್ಣ ಖಂಡ್ರೆ ಮುತ್ಸದ್ಧಿ ರಾಜಕಾರಣಿ. ಇನ್ನು ಡಾ. ಪ್ರೇಮಾ ಸಿರ್ಸೆ,  ಡಾ. ವ್ಹಿ.ಜಿ. ಭಂಡೆ, ಎಂ.ಜಿ. ದೇಶಪಾಂಡೆ, ಡಾ. ಗವಿಸಿದ್ಧಪ್ಪ ಪಾಟೀಲ, ಪಂಡಿತ ಬಸವರಾಜ, ಕಾಶೀನಾಥ ರೆಡ್ಡಿ, ವೀರಶೆಟ್ಟಿ ಬಾವುಗೆ ಉತ್ತಮ ಸಾಹಿತಿಗಳು.

ಹೀಗೆ ಬೀದರ್‌ ಜಿಲ್ಲೆಯ ಮಹನೀಯರ ಬಗ್ಗೆ ಅರಿಯಲು ಬಯಸುವವರಿಗೆ ಇದೊಂದು ಸಂಗ್ರಹಯೋಗ್ಯ ಕೃತಿ. 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books