ಒಡನಾಡಿ

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 67

₹ 1.00




Year of Publication: 1945
Published by: ಕೃಷ್ಣಶರ್ಮ ಬೆಟಗೇರಿ
Address: ಜಯಂತಿ ಕಾರ್ಯಾಲಯ, ಧಾರವಾಡ

Synopsys

ಕವಿ ಆನಂದ ಕಂದ ಅವರೇ ಹೇಳುವಂತೆ ಒಡನಾಡಿ ಕವನ ಸಂಕಲನದಲ್ಲಿಯ ಬಹುತೇಕ ಹಾಡುಗಳು ಭಾವಗೀತೆಗಳು. ಬಗೆವಾಡುಗಳು. ಇವುಗಳನ್ನು ಬರೀ ಓದಿಕೊಳ್ಳುವುದಕ್ಕಿಂತ ಹಾಡಿಕೊಂಡರೆ ಹೆಚ್ಚು ಚೆನ್ನಾಗಿರುವುದು. ಹತ್ತು ವರ್ಷ ಕತ್ತಲೆಯಲ್ಲಿ ಬಿದ್ದುಕೊಂಡಿದ್ದ ಈ ಪುಸ್ತಕವು, ಇದ್ದುದರಲ್ಲೇ ಮುದ್ದಾದ ಉಡುಗೆ-ತೊಡಿಗೆಯುಟ್ಟು ಅಚ್ಚುಕಟ್ಟಾಗಿದೆ ಎಂದು ತಮ್ಮ ಕವನಗಳನ್ನು ಸಂಭ್ರಮಿಸಿದ್ದಾರೆ. ಒಡನಾಡಿ, ಚೆಂದದೊಡತಿ, ನನ್ನಾಕೆಗೆ, ಮಾಲೆಗಾರನ ಮಾತು, ಹಚ್ಚs ದೀಪಾ ನಲ್ಲೆ, ಬಂತು ಬಂತು ಮಾಹಿ ಹೀಗೆ ಒಟ್ಟು 28 ಕವನಗಳು ಸಂಕಲನದಲ್ಲಿವೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books