ಬಾಲರಾಮಾಯಣ

Author : ಎಂ.ಎ. ಹೆಗಡೆ

Pages 248

₹ 220.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ನಾಟಕಕ್ಕೆ ಕವಿಯು ಬಾಲರಾಮಾಯಣವೆಂದು ಕರೆದಿದ್ದಾನೆ. ಇದು ಯಾಕೆಂಬ ಬಗೆಗೆ ವಿವರಣೆಯಿಲ್ಲ. ಇದು ಬಾಲಕರಿಗಾಗಿ ಬರೆದ ರಾಮಾಯಣ ಖಂಡಿತವಾಗಿಯೂ ಅಲ್ಲ. ಇದು ಬಾಲವೆನಿಸಿದ್ದು ಹೇಗೆಂಬುದು ನಮ್ಮ ಊಹೆಗೆ ಬಿಟ್ಟಿದ್ದು. ರಾಮಾಯಣ ಕಥೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದನ್ನು ಇದು ಸೂಚಿಸಬಹುದು. ನಿರೂಪಣಾ ವಿಧಾನದಲ್ಲಿಯ ಹೊಸತನವನ್ನು ಲಕ್ಷಿಸಬಹುದು. ಅದನ್ನು ವಿನೂತನ ರಾಮಾಯಣವೆಂದು ಕರೆಯಬಹುದು. ರಾಮಾಯಣಕ್ಕೆ ಬಾಲವಾದುದು ಅಂದರೆ ಪೂರಕವಾದುದು ಎಂಬ ಅರ್ಥದಲ್ಲಿಯೂ ಇರಬಹುದು. ಈ ಎಲ್ಲ ಅರ್ಥಗಳನ್ನು ಸೂಚಿಸುವ ಉದ್ದೇಶವೂ ಇರಬಹುದು. ನಮಗಂತೂ ಅದು ವಿನೂತನ ರಾಮಾಯಣವೆನಿಸುತ್ತದೆ. ರಾಮಾಯಣದಲ್ಲಿ ಕಳಂಕಿತರೆಂದು ಗುರುತಿಸಲ್ಪಟ್ಟವರೆಲ್ಲ ಇಲ್ಲಿ ನಿಷ್ಕಳಂಕರಾಗಿದ್ದಾರೆ.ಮೂಲದ ಕಥೆಯನ್ನು ಕವಿಗಳು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಸಂಸ್ಕೃತ ನಾಟಕಗಳಲ್ಲಿ ಪರಂಪರೆಯೇ ಆಗಿದೆ. ನಾಟಕವಿರುವುದು ಕಥೆಯನ್ನು ನಿರೂಪಿಸುವುದಕ್ಕಲ್ಲ. ಕಥೆಯನ್ನು ತಿಳಿಯಲು ಬಯಸುವವರು ಮೂಲಗ್ರಂಥವನ್ನು ಅವಲಂಬಿಸಬೇಕೆನ್ನುವುದು ಅವರ ಧೋರಣೆ. ರಾಜಶೇಖರನು ಅದೇ ಪರಂಪರೆಯಲ್ಲಿ ಬಂದವನು. ತನ್ನ ಹಿಂದಿನವರಾದ ಕಾಲಿದಾಸ, ಭವಭೂತಿಯರನ್ನು ಅನುಸರಿಸುತ್ತಾನೆ. ಅವರಿಬ್ಬರ ಪ್ರಭಾವಕ್ಕೂ ಒಳಗಾಗಿದ್ದಾನೆ. ಕವಿಯು ತನ್ನನ್ನು ಭವಭೂತಿಯ ಅವತಾರವೆಂದು ಕರೆದುಕೊಳ್ಳುವುದನ್ನು ನೆನೆಯಬಹುದು.

About the Author

ಎಂ.ಎ. ಹೆಗಡೆ
(03 July 1948)

ಇವರು  ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು. ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್   ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ...

READ MORE

Related Books