ವಿಷ್ಣುಭಟ್ಟ ಗೋಡ್ಸೆಯ ‘ನನ್ನ ಪ್ರವಾಸ’

Author : ಜಿ. ಭಾಸ್ಕರ ಮಯ್ಯ

Pages 256

₹ 200.00




Year of Publication: 2019
Published by: ಜನವಾದಿ ಪ್ರಕಾಶನ
Address: ಗುಂಡಿ-576226
Phone: 9448428448

Synopsys

ಲೇಖಕ ಡಾ. ಜಿ. ಭಾಸ್ಕರ ಮಯ್ಯ ಅವರು ಮೂಲ ಮರಾಠಿಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಪ್ರವಾಸ ಕಥನ- ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ’. ವಿಷ್ಣುಭಟ್ಟ ಗೋಡ್ಸೆ ಅವರು ಮರಾಠಿಯಲ್ಲಿ 1883 ರಲ್ಲಿ ಈ ಕೃತಿಯನ್ನು ಬರೆದಿದ್ದು, ಅವರ ನಿಧನಾನಂತರ 1907 ರಲ್ಲಿ ಎರಡನೇ ಬಾರಿಗೆ ಕೃತಿಯು ಮಾಝಾ ಪ್ರವಾಸ ಹೆಸರಿನಲ್ಲಿ ಮರು ಮುದ್ರಣಗೊಳ್ಳುತ್ತದೆ. ಇಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಸಮಾಜವನ್ನು ಹೇಗೆ ತನ್ನ ಅನುಭವಗಳಲ್ಲಿ ಚಿತ್ರಿಸುತ್ತಾನೆ ಹಾಗೂ ಚಿತ್ರಿಸಿದ ಸಂಗತಿಗಳು ಅದೆಷ್ಟು ಸುಂದರ, ಸತ್ಯ ಸಂಗತಿಗಳು ಆಗಬಹುದು ಎಂಬುದಕ್ಕೆ ಈ ಗ್ರಂಥ ಒಂದು ಉದಾಹರಣೆ.  1857ರಲ್ಲಿ ಭಾರತದ ಪ್ರಥಮ ಮಹಾಸಂಚಲನದಲ್ಲಿ ಆದ ಘಟನೆಗಳನ್ನು ವಿವರಿಸುತ್ತಾರೆ. ಇಲ್ಲಿ ಸಿಪಾಯಿಗಳ ಜೀವನ ಕುರಿತ ಸಮಗ್ರ ವಿಚಾರವನ್ನು ಕಟ್ಟಿಕೊಡುವ ಗೋಡ್ಸೆ, ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಹಾಗೂ ಭಾರತೀಯ ಸಿಪಾಯಿಗಳು ಲೂಟಿಕೋರರ ಕೈಗೆ ಸಿಕ್ಕಿ, ತಾವು ಪಡೆದುಕೊಂಡದನ್ನೆಲ್ಲಾ ಕಳೆದುಕೊಂಡ ವಿಚಾರವನ್ನು ಪ್ರಸ್ತುತಪಡಿಸುತ್ತಾರೆ. ಹೀಗೆ ಅವರ ಅನುಭವದ ಬುತ್ತಿಯಿಂದ ಬಂದಂತಹ ಹಲವಾರು ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. 

About the Author

ಜಿ. ಭಾಸ್ಕರ ಮಯ್ಯ

ಡಾ.ಜಿ. ಭಾಸ್ಕರಮಯ್ಯ ರವರು ಕುಂದಾಪುರದ ಭಂಡಾರಕರ ಕಾಲೇಜು ಮತ್ತು ಮುಲ್ಕಿ ಕಾಲೇಜುಗಳಲ್ಲಿ ಒಟ್ಟು ನಾಲ್ಕು ದಶಕಗಳಿಗೂ ಮೀರಿ ಸಂಸ್ಕೃತ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳನ್ನೂ, ತತ್ವಶಾಸ್ತ್ರ, ಪ್ರಾಕ್ತನಶಾಸ್ತ್ರಗಳನ್ನು ಬೋಧಿಸಿ, ಹಿಂದಿ ಪ್ರಾಧ್ಯಾಪಕರಾಗಿದ್ದು ಈಗ ನೀವೃತ್ತರಾಗಿದ್ದಾರೆ. ಡಾ.ಮಯ್ಯರವರು ಬಹುಭಾಷಾ ವಿಶಾರದರು. ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಅವರದು ಆಳವಾದ ಪಾಂಡಿತ್ಯ. ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅವರ ಆಸಕ್ತಿ ಹರಡಿದೆ. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿಯನ್ನೂ ಗಳಿಸಿದ್ದಾರೆ. ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಒಂಟಿತನ, ಪರಕೀಯಪ್ರಜ್ಞೆ ...

READ MORE

Related Books