ನುಡಿಯ ನೆರಳು

Author : ಶೈಲಜಾ ಉಡಚಣ

Pages 116

₹ 80.00




Year of Publication: 2002
Published by: ಚೇತನ ಪ್ರಕಾಶನ
Address: ಸರಸ್ವತಿಪುರ, ಗುಲಬರ್ಗಾ ವಿಶ್ವವಿದ್ಯಾಲಯ ಅಂಚೆ, ಕಲಬುರಗಿ-585106

Synopsys

‘ನುಡಿಯ ನೆರಳು’ಅಮೃತಾ ಪ್ರೀತಮ್‌ ಅವರ ಪ್ರವಾಸಕಥನವಾಗಿದೆ. ಕಣ್ಣುಂದೆಯೇ ಹಿಂದೂ-ಮುಸ್ಲಿಂ ಬಾಂಧವರ ಘೋರ ಹತ್ಯೆಗಳನ್ನು ಕಂಡು ಅಣ್ಣ-ತಮ್ಮಂದಿರ ಕೈಗಳಲ್ಲೇಕೆ ಶಸ್ತ್ರಾಸ್ತ್ರಗಳೆಂದು ಆಳವಾಗಿ ಚಿಂತಿಸಿದ ಶಾಂತಿಪ್ರಿಯರು. ತಾವು ಎದುರಿಸಿದ ಭಯಾನಕ ಸನ್ನಿವೇಶಗಳನ್ನು ಆತ್ಮಕಥೆಯಂತೆ ಈ ಪ್ರವಾಸಕಥನದಲ್ಲಿ ತಿಳಿಸಿದ್ದಾರೆ.

About the Author

ಶೈಲಜಾ ಉಡಚಣ
(26 July 1935 - 12 June 2010)

ಆಶಾವಾದಿ ಕವಯತ್ರಿ ಎಂಬ ಪ್ರಶಂಸೆಗೆ ಪಾತ್ರರಾಗಿರುವ ರಾಯಚೂರಿನ ಉಡಚಣದವರಾದ ಶೈಲಜಾ ಉಡಚಣ ಅವರು ಜನಿಸಿದ್ದು 1935 ಜುಲೈ 26ರಂದು. ತಂದೆ ಗುರುಮಲ್ಲಪ್ಪ, ತಾಯಿ ಪಾರ್ವತಿ. ದೂರ ಶಿಕ್ಷಣ ಪಡೆದು ಗುಲ್ಬರ್ಗದ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಮೈಸೂರು ಹಾಗೂ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಒಂದುಗಳಿಗೆ, ಕಾದುನೋಡು, ಸ್ವಗತ, ಕಪ್ಪುನೆಲ ಸೊಕ್ಕಿದ ಸೂರ್ಯ, ಕಾಲ ದೂರವಿಲ್ಲ ಮತ್ತು ಕೇಳುಮಗಾ, ಕಾದು ನೋಡು ವಚನಕಾರರ ದೃಷ್ಟಿಯಲ್ಲಿ ಸ್ತ್ರೀ, ವಚನಗಳಲ್ಲಿ ಸತಿಪತಿಭಾವ, ನನ್ನ ಲೇಖನಗಳು ಮುಂತಾದವು. ಅನುಪಮಾ ಪ್ರಶಸ್ತಿ, ...

READ MORE

Reviews

ಹೊಸತು-2003- ಎಪ್ರಿಲ್‌

ಅಮೃತಾ ಪ್ರೀತಮ್ ಪಂಜಾಬಿ ಸಾಹಿತ್ಯದಲ್ಲಿ ಭಾರತೀಯ ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ್ಯ ಸಂಗ್ರಾಮದ ದಂಗೆಯ, ದೇಶ ವಿಭಜನೆಯ ಕರಾಳ ದಿನಗಳಲ್ಲಿ ಕವನಗಳ ಮೂಲಕ ಹಿಂಸೆ- ಕ್ರೌರ್ಯವನ್ನು ಪ್ರತಿಭಟಿಸಿದವರು. ಕಣ್ಮುಂದೆಯೇ ಹಿಂದೂ-ಮುಸ್ಲಿಂ ಬಾಂಧವರ ಘೋರ ಹತ್ಯೆಗಳನ್ನು ಕಂಡು ಅಣ್ಣ-ತಮ್ಮಂದಿರ ಕೈಗಳಲ್ಲೇಕೆ ಶಸ್ತ್ರಾಸ್ತ್ರಗಳೆಂದು ಆಳವಾಗಿ ಚಿಂತಿಸಿದ ಶಾಂತಿಪ್ರಿಯರು. ತಾವು ಎದುರಿಸಿದ ಭಯಾನಕ ಸನ್ನಿವೇಶಗಳನ್ನು ಆತ್ಮಕಥೆಯಂತೆ ಹೇಳಿಕೊಂಡಿದ್ದಾರೆ.

Related Books