ಕಮಾನು ಕಟ್ಟುಕತೆ ಕಟ್ಟುಪಾಡು

Author : ನಾಗರಾಜ ವಸ್ತಾರೆ

Pages 115

₹ 175.00




Year of Publication: 2018
Published by: ಸಾಂಚಿಮುದ್ರೆ ಪ್ರಕಾಶನ
Address: ಸಾಂಚಿಮುದ್ರೆ ಪ್ರಕಾಶನ, ಬೆಂಗಳೂರು

Synopsys

ಲೇಖಕರು ಆರ್ಕಿಟೆಕ್ಚರ್‌ ಕಲಿಯುತ್ತದ್ದಾಗ ಕಾಲೇಜು ಹೋದದ್ದು ಕಡಿಮೆ. ಐದು ವರ್ಷಗಳ ಬಿ-ಆರ್ಕ್ ಕೋರ್ಸಿನಲ್ಲಿ ಓದಿ ಕಲಿತಿದ್ದಕ್ಕಿಂತ ನೋಡಿ ಕಲಿತಿದ್ದೇ ಹೆಚ್ಚು.ಲೇಖಕರು ವಿದ್ಯಾರ್ಥಿಯಾಗಿದ್ದಾಗ ವರ್ಷಪೂರ್ತಿ ಪ್ರವಾಸ ಮಾಡುತ್ತಿದ್ದರು ಈ ಸುತ್ತಾಟದ ಬದುಕನ್ನು “ಕಮಾನು ಕಟ್ಟುಕತೆ ಕಟ್ಟುಪಾಡು”ಕೃತಿಯಲ್ಲಿ ಕಥೆಗಾರ ನಾಗರಾಜ ರಾಮಸ್ವಾಮಿ ವಸ್ತಾರೆ ವಿವರಿಸಿದ್ದಾರೆ. ಹೊಸ ಮಾದರಿಯಲ್ಲಿ ಈ ಪ್ರವಾಸ ಕಥೆಯನ್ನ ರಚಿಸಲಾಗಿದೆ. ಗುಡಿ ಗೋಪುರಗಳು, ಕೋಟೆ ಕೊತ್ತಲಗಳು, ಮಸೀದಿಗಳು, ಕಮಾನುಗಳಿಗೆ ವಸ್ತಾರೆ ಲೇಖನಿಯು ಮರುಜೀವ ಪಡೆದಿವೆ. ಲೇಖಕರು ಆರ್ಕಿಟೆಕ್ಟ್ ಪ್ಲಸ್ ಕತೆಗಾರ ಕಾಣುವ ಬಗೆ ಹೇಗೆ ಎನ್ನುವುದನ್ನು ಇಲ್ಲಿ ಸುಂದರವಾಗಿ ವಿವರಿಸಲಾಗಿದೆ. ಸರಳ ಸುಂದರ ಭಾಷೆ ಉಪಯುಕ್ತ.

About the Author

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books