ಕರ್ನಾಟಕದ ಆರಂಭಿಕ ಶಿಲ್ಪಕಲೆ

Author : ಎಚ್.ಎಸ್. ಗೋಪಾಲರಾವ್

Pages 84

₹ 25.00




Year of Publication: 2008
Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

‘ಕರ್ನಾಟಕದ ಆರಂಭಿಕ ಶಿಲ್ಪಕಲೆ’ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿದ ಸುವರ್ಣ ಕರ್ನಾಟಕ ಶಿಲ್ಪಕಲಾ ಮಾಲೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯ ಸಂಪಾದಕರು ಎಚ್.ಎಸ್. ಗೋಪಾಲ ರಾವ್ ಹಾಗೂ ಆರ್. ಎಚ್. ಕುಲಕರ್ಣಿ. ಕೃತಿಯಲ್ಲಿ ಪ್ರಾಗೈತಿಹಾಸಿಕ ಕಾಲದ ಕಲಾ ಚಟುವಟಿಕೆಗಳು, ಇತಿಹಾಸ ಆರಂಭ ಕಾಲದ ಶಿಲ್ಪಕಲೆ, ಸನ್ನತಿಯ ಬೌದ್ಧ ಶಿಲ್ಪಗಳು, ಸಾತವಾಹನ ಕಾಲದ ಶಿಲ್ಪಕಲೆ, ಬನವಾಸಿ ಪ್ರದೇಶದ ಶಿಲ್ಪಕಲೆ, ಬನವಾಸಿ ಕದಂಬರ ಕಾಲದ ಶಿಲ್ಪಕಲೆ, ಉಪಸಂಹಾರ ಪರಾಮರ್ಶನ ಗ್ರಂಥಗಳು ಚಿತ್ರಗಳು, ಸೇರಿದಂತೆ ಹಲವು ಮಹತ್ವದ ವಿಚಾರಗಳ ವಿವರಣೆಗಳಿವೆ. ಇತಿಹಾಸ ಪೂರ್ವ ಮತ್ತು ಇತಿಹಾಸ ಅರಂಭ ಕಾಲದ ಶಿಲ್ಪ ಕಲೆಯ ಬಗ್ಗೆ ಬರೆದುಕೊಟ್ಟವರು ಅದೇ ವಿಷಯವನ್ನು ಕುರಿತು ಸಂಶೋಧನೆ ಮಾಡಿರುವ ಕಲಾ ಇತಿಹಾಸಕಾರ ಡಾ. ಆರ್. ಎಚ್. ಕುಲಕರ್ಣಿ ಈ ಕೃತಿಯನ್ನೂ ಅರ್ಥಪೂರ್ಣವಾಗಿ ರಚಿಸಿದ್ದಾರೆ.

About the Author

ಎಚ್.ಎಸ್. ಗೋಪಾಲರಾವ್
(18 November 1946)

ಡಾ. ಎಚ್.ಎಸ್. ಗೋಪಾಲರಾವ್  ಅವರು 1946ರ ನವೆಂಬರ್‌ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿ ನಂತರ ಅವರು ಮೈಸೂರು ವಿವಿ ಕನ್ನಡ ಎಂ.ಎ. (1984- ಎರಡು ಚಿನ್ನದ ಪದಕ) ಪದವಿ ಪಡೆದರು.  ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಪಿಎಚ್. ಡಿ.  ಪದವಿ ಪಡೆದರು. (ಮೈಸೂರು ವಿ ವಿ 1991). ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಕೆಪಿಟಿಸಿಎಲ್ ನಿಯಮಿತ, (ಕನ್ನಡ ಸಮನ್ವಯಾಧಿಕಾರಿಯಾಗಿ) ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಕೆಲಸ ನಿರ್ವಹಿಸಿದ್ದಾರೆ.  ಜೇನು ನಂಜು, ...

READ MORE

Related Books