ಕೃಷ್ಣಾ ತೀರದ ಜನಪದ ಒಗಟುಗಳು

Author : ಪ್ರಕಾಶ ಗ. ಖಾಡೆ

Pages 44

₹ 40.00




Year of Publication: 2005
Published by: ಅಂಕಿತ್ ಪ್ರಕಾಶನ
Address: ಜಯನಗರ್ ಕಾಲೋನಿ, ಬಾಗಲಕೋಟೆ
Phone: 9845500890

Synopsys

ಹಿರಿಹೊಳೆ ಎಂದೇ ಜನಪದರಲ್ಲಿ ರೂಢಿಗತವಾಗಿರುವ ಕೃಷ್ಣಾ ನದಿ ತೀರ ಪ್ರದೇಶದ ಜನರ ನಾಲಗೆ ಮೇಲೆ ನಲಿದಾಡುತ್ತಿದ್ದ ಒಗಟುಗಳನ್ನು ಕೇಳಿ, ಸಂಗ್ರಹಿಸಿ ಸಂಪಾದಿಸುವುದು ಈ ಜನಪದ ಸಾಹಿತ್ಯದಲ್ಲಿ ಮಹತ್ವದ್ದಾಗಿದೆ. ಕೃಷ್ಣಾ ತೀರದ ಪ್ರದೇಶಗಳಲ್ಲಿ ಜಾನಪದ ಸಿರಿ ಸೊಬಗು ತುಂಬಿ ತುಳುಕುತ್ತಿದೆ, ಬೀಸುಕಲ್ಲಿನ ಮುಂದೆ ಕುಳಿತು ಹಾಡು ಹೇಳುತ್ತಾ ಬೆಳಗು ಮುಂಜಾನೆ ಅರ್ಧ ಚೀಲ ಜೋಳ ಬೀಸಿದರೂ 'ಕಾಳ ಮುಗಿದವ ನಮ್ಮ ಹಾಡ ಮುಗಿಯಲಿಲ್ಲ' ಎಂಬಂತೆ ನಾವೆಷ್ಟೇ ಸಂಗ್ರಹಿಸಿದರೂ ಇನ್ನೂ ಉಳಿದುಕೊಂಡೇ ಇರುವ ಜಾನಪದ ಸಂಪತ್ತು ಇಲ್ಲಿದೆ.ಈ ಸಂಪತ್ತಿನ ಭಾಗವಾಗಿ ಈ ನದಿ ತೀರದ ಹಳ್ಳಿಗಳಲ್ಲಿ ಹತ್ತಾರು ವರ್ಷಗಳಿಂದ ಸುತ್ತಾಡಿ ತಂದ ಒಗಟುಗಳೇ ಈ 'ಕೃಷ್ಣಾ ತೀರದ ಜನಪದ ಒಗಟುಗಳು'. ಎಂದು ಲೇಖಕರು ಹೇಳಿಕೊಂಡಿದ್ದಾರೆ. 

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books