ಪ್ರಾಚೀನ ಸಾಹಿತ್ಯ

Author : ಟಿ.ಎಸ್. ವೆಂಕಣ್ಣಯ್ಯ

Pages 133

₹ 1.00




Year of Publication: 1948
Published by: ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್
Address: ತ.ಸು. ಶಾಮರಾಯರು, ಮೈಸೂರು.

Synopsys

ಪ್ರೊ. ಟಿ.ಎಸ್. ವೆಂಕಣ್ಣಯ್ಯ ಅವರು ಬರೆದ ಕೃತಿ-ಪ್ರಾಚೀನ ಸಾಹಿತ್ಯ. 1927 ಹಾಗೂ 1947ರಲ್ಲಿ ಎರಡು ಮುದ್ರಣ ಕಂಡು ಪ್ರಸ್ತುತ ಕೃತಿಯು ಮೂರನೇ ಆವೃತ್ತಿಯಾಗಿದೆ. ರಾಮಾಯಣ, ಶಾಕುಂತಲ ಹೀಗೆ ಸಂಸ್ಕೃತ ಮೂಲದ ವಿವಿಧ ಗ್ರಂಥಗಳನ್ನು ಕವಿ ರವೀಂದ್ರನಾಥ ಠಾಕೂರು ಅವರು ಬಂಗಾಳಿಯ;ಲ್ಲಿ ಬರೆದ ವಿಮರ್ಶಾ ಲೇಖನಗಳನ್ನು ಈ ಲೇಖಕರು ಕನ್ನಡಕ್ಕೆ ಪರಿವರ್ತಿಸಿದ್ದಾರೆ. ರವೀಂದ್ರರ ಶಾಕುಂತಳಾ ನಾಟಕದ ವಿಮರ್ಶೆಯ ಜೊತೆಗೆ ಕವಿ ಬಂಕಿಮಚಂದ್ರ ಅವರೂ ಬರೆದ ಇದೇ ನಾಟಕದ ವಿಮರ್ಶೆಯೂ ಬಂಗಾಳಿಯಲ್ಲಿದ್ದು, ಅದನ್ನೂ ಸಹ ಕನ್ನಡಕ್ಕೆ ಅನುವಾದಿಸಲಾಗಿದೆ.

ಕೃತಿಯಲ್ಲಿ ರಾಮಾಯಣ, ಮೇಘದೂತ, ಕುಮಾರ ಸಂಭವ ಮತ್ತು ಶಾಕುಂತಲ, ಕಾದಂಬರಿ ಚಿತ್ರ, ಶಾಕುಂತಲ, ಕಾವ್ಯದ ಅನಾದರ, ಧಮ್ಮಪದ, ಶಾಕುಂತಲ, ಮಿರಾಂಡಾ ಮತ್ತು ಡೆಸ್ಟಿಮೋನಾ ಹೀಗೆ ವಿವಿಧ ಅಧ್ಯಾಯಗಳಡಿ ಅನುವಾದಿಸಲಾಗಿದೆ.

About the Author

ಟಿ.ಎಸ್. ವೆಂಕಣ್ಣಯ್ಯ
(01 October 1885 - 28 February 1939)

ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...

READ MORE

Related Books