ಕಿರಾತಾರ್ಜುನೀಯ

Author : ಕೆ.ಕೃಷ್ಣಮೂರ್ತಿ

Pages 173

₹ 3.00




Year of Publication: 1955
Published by: ಎಚ್.ಎಂ. ಶಂಕರ ನಾರಾಯಣ ರಾವ್
Address: ಶಾರದಾ ಮಂದಿರ , ಕೃಷ್ಣರಾಜಪುರಂ, ಮೈಸೂರು

Synopsys

ಭಾರತೀಯ ಸಂಸ್ಕೃತ ಮಹಾಕಾವ್ಯದ ಕನ್ನಡ ಪದ್ಯಾನುವಾದವೇ-ಕನ್ನಡ ಕಿರಾತಾರ್ಜುನೀಯ. ಸಂಸ್ಕೃತ ಕವಿ ಭಾರವಿಯು ಅರ್ಥ ಗೌರವಕ್ಕೆ ಹೆಸರಾದವನು. ಆತನ ಕಾವ್ಯದಲ್ಲಿಯ ರಸ ಪ್ರೀತಿಗೆ, ಅರ್ಥಸೃಷ್ಟಿಗೆ ಭಂಗ ಬಾರದ ಹಾಗೆ ಡಾ. ಕೆ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರವಿ ಕವಿಯ ಕಾಲ-ದೇಶ-ಜೀವನ ವೃತ್ತಾಂತ ಸೇರಿದಂತೆ ಆತನ ಕೃತಿಗಳು, ಸಂಸ್ಕೃತ ಮಹಾಕಾವ್ಯಗಳಲ್ಲಿ ಕಿರಾತಾರ್ಜುನೀಯ ಕೃತಿಯ ಸ್ಥಾನ, ಕಾವ್ಯದ ಪರಿಚಯ, ಭಾರವಿ ಕವಿಯ ಪಾಂಡಿತ್ಯ, ವರ್ಣನೆಯ ಕೌಶಲ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಲಾಗಿದೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books