ರಥಿಕ-ಸಾರಥಿ ಸಂವಾದ

Author : ಮಹಾಬಲೇಶ್ವರ ರಾವ್

Pages 286

₹ 250.00




Year of Publication: 2012
Published by: ಚಿಂತನ ಪುಸ್ತಕ
Address: #1863, 11ನೇ ಮುಖ್ಯ ರಸ್ತೆ, 38ನೇ ಅಡ್ಡರಸ್ತೆ, 4 ಟಿ. ಬ್ಲಾಕ್ ಜಯನಗರ. ಬೆಂಗಳೂರು-560041
Phone: 9902249150

Synopsys

’ರಥಿಕ-ಸಾರಥಿ ಸಂವಾದ’ ಕೃತಿಯು ಭಗವದ್ಗೀತೆಯ ಭೌತವಾದೀ ವಾಖ್ಯಾನವಾಗಿದೆ. ಮಹಾಬಲೇಶ್ವರ ರಾವ್ ಅವರ ಅನುವಾದಿತ ಕೃತಿ ಇದು. ಕೃತಿಗೆ ಬೆನ್ನುಡಿ ಬರೆದಿರುವ ಚಿ. ರಾಮಕೃಷ್ಣ ಅವರು, ಪ್ರಸ್ತುತ ಗ್ರಂಥದಲ್ಲಿ ಲೇಖಕರು ಗೀತೆಯನ್ನು ಭೌತವಾದಿ ನೆಲೆಯಲ್ಲಿ ನಿಂತು ಅರ್ಥೈಸಲು ಪ್ರಯತ್ನ ಮಾಡಿದ್ದಾರೆ. ಗೀತೆಯ ಐತಿಹಾಸಿಕ ಸಂದರ್ಭದ ಸಮಗ್ರ ಪರಿಚಯ ಮತ್ತು ಅವಲೋಕನವಿಲ್ಲದೆ ಅದರ ಭೌತವಾದಿ ವಿಶ್ಲೇಷಣೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಡಿ.ಡಿ ಕೋಸಾಂಬಿ ಮುಂತಾದ ವಿದ್ಯಾಂಸರು ಗೀತೆಯ ಚಾರಿತ್ರಿಕ ಸಂದರ್ಭಕ್ಕೆ ಒತ್ತುಕೊಟ್ಟು ವಿಮರ್ಶೆಯಲ್ಲಿ ತೊಡಗಿದ್ದಾರೆ. ಅದನ್ನು ತಮ್ಮದೇ ವಿಧಾನದಿಂದ ಮಾಡಹೊರಟಿರುವ ಮೋಹನ್ ರಾಜ್ ಅವರು ಕೃಷ್ಣನನ್ನು ಇತಿಹಾಸ ಪುರುಷನೆಂದು ವಾದಿಸಿದ್ದಾರೆ. ಮೂಲತಃ ಗೀತೆಯ ಆಧುನಿಕ ಅಂಶಗಳ ಸಹಾಯದಿಂದ ಅದರ ಮಾಪನಕ್ಕೆ ಹೊರಡಬೇಕಾಗುತ್ತದೆ. ಅಂತಹ ಸಂಕೀರ್ಣ ಗ್ರಂಥವನ್ನು ವೈಚಾರಿಕವಾಗಿ, ಚಾರಿತ್ರಿಕವಾಗಿ, ಅಧ್ಯಯನ ಮಾಡುವುದರಲ್ಲಿ ಹತ್ತಾರು ಹೆಜ್ಜೆಗಳನ್ನು ಕ್ರಮಿಸಿರುವ ಮೋಹನ್ ರಾಜ್ ಪ್ರಶಂಸನೀಯರು. ಈ ಹಾದಿಯಲ್ಲಿ ಇನ್ನೂ ಆಳವಾದ ಅಧ್ಯಯನಗಳು ನಡೆಯಲು ಅವರ ಕೆಲಸ ಸಹಾಯ ನೀಡುತ್ತವೆ. ಗೀತೆಗೆ ನಿಜವಾದ ಗೌರವ ದೊರೆಯುವಂತಾಗುವುದು ಅಂತಹ ವಿಶಾಲ ತಳಹದಿಯ ಮೇಲೆ ಅಧ್ಯಯನ ನಡೆಸಿದಾಗಲೇ ಎಂಬುದನ್ನು ಅವರ ಗ್ರಂಥವು ಮನದಟ್ಟು ಮಾಡಿಕೊಟ್ಟಿದೆ’ ಎಂದಿದ್ದಾರೆ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books