ಶಬರಿಗಾದನು ಅತಿಥಿ ದಾಶರಥಿ

Author : ಶ್ರೀನಿವಾಸ ಕೃ. ದೇಸಾಯಿ

Pages 104

₹ 120.00




Year of Publication: 2020
Published by: ದೇಸಿ ಪುಸ್ತಕ
Address: #121, 13ನೇ ಮುಖ್ಯರಸ್ತೆ, ಎಂ.ಸಿ. ಲೇಔಟ್, ವಿಜಯನಗರ ಬೆಂಗಳೂರು- 560040
Phone: 9845096668

Synopsys

ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕಿಷ್ಕಿಂದಾ ಸಂಪುಟದಲ್ಲಿಯ ‘ಶಬರಿಗಾದನು ಅತಿಥಿ ದಾಶರಥಿ’ ಸಂಚಿಕೆಯ ಅನುವಾದ. ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ಇದೇ ಸಂಚಿಕೆಯ ಅನುವಾದವನ್ನು ಲೇಖಕ ಶ್ರೀನಿವಾಸ ಕೃ. ದೇಸಾಯಿ ಅವರು ಸಂಕಲಿಸಿದ್ದಾರೆ. 

ಮಹಾಕಾವ್ಯದ ಸಮಸ್ತ ಲಕ್ಷಣಗಳು ಸಮೃದ್ಧವಾಗಿ ಚಿತ್ರಿತವಾಗಿವೆ. ಲಕ್ಷ್ಮಣ- ಕಬಂಧರೊಡನೆ ಸಣ್ಣ ಯುದ್ಧವಿದೆ. ಪ್ರಕೃತಿ ವರ್ಣನೆ ತುಂಬಿದೆ, ವೇದನೆ-ದೌರ್ಬಲ್ಯಗಳಿವೆ, ದೈರ್ಯ ಉತ್ಸಾಹದ ಮಾತುಗಳಿವೆ. ಪ್ರಾರ್ಥನೆಯ ಧ್ವನಿಯಿದೆ. ದೇವರ ಸ್ವರೂಪದ ಚಿತ್ರವಿದೆ. ಬಾಯಲ್ಲಿ ಭೋಜನವಿದೆ, ಮನಮುಟ್ಟುವ ಸಂಭಾಷಣೆಗಳಿವೆ. ಮನುಷ್ಯ ಸ್ವಭಾವದ ದೌರ್ಬಲ್ಯತೆಯಿದೆ, ಪ್ರೇಮ-ಕರುಣೆಗಳ ಭಾವ ತುಂಬಿದೆ, ಉತ್ಕೃಷ್ಟ ಸೇವೆಯ ಸ್ಪರೂಪವಿದೆ. ಹೀಗೆ ಕುವೆಂಪು ಅವರ ಪೂರ್ಣ ದೃಷ್ಟಿಯು ಸಂಪೂರ್ಣವಾಗಿ ಸಿದ್ಧಿ ಪಡೆದ ಸಂಚಿಕೆ ಇದು. 

About the Author

ಶ್ರೀನಿವಾಸ ಕೃ. ದೇಸಾಯಿ

ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ.  ...

READ MORE

Related Books