ಸಾಲಿ ರಾಮಚಂದ್ರರಾಯರ ಕನ್ನಡ ಮೇಘದೂತ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 62




Published by: ಮಿಂಚಿನಬಳ್ಳಿ ಗ್ರಂಥಮಾಲೆ
Address: ನಂ.2, ಮೆಣಸಿನಕಾಯಿ ಓಣಿ, ಮಂಗಳವಾರಪೇಟೆ, ಧಾರವಾಡ-1
Phone: 0836-2447002

Synopsys

ಕನ್ನಡ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲಿ ಸಾಲಿ ರಾಮಚಂದ್ರರಾಯರೂ ಒಬ್ಬರು. ‘ಕನ್ನಡದ ಪುಲ್ಲೆನಗೆ ಪಾವನ ತುಲಸಿ’ ಎಂದು ಹಾಡಿದ್ದ ‘ಸಾರಾ’ ಕನ್ನಡದ ಮೊದಲ ವಿಲಾಪಗೀತೆ ಬರೆದವರು. ರಾಮಾಯಣ ಮಹಾಕಾವ್ಯ ಬರೆಯಲು ಹೊರಟು ಟೀಕಾಕಾರ್ಯರ ಟೀಕೆಗಳಿಗೆ ಬೇಸತ್ತು ಎರಡೇ ಭಾಗಗಳಿಗೆ ಪ್ರಕಟಣೆ ನಿಲ್ಲಿಸಿದವರು. ಸಾಲಿ ರಾಮಚಂದ್ರರಾಯರ ‘ಮಾನಸಪುತ್ರ’ ಎಂದು ಗುರುತಿಸಲಾಗುವ ಪಟ್ಟಣಶೆಟ್ಟಿ ಅವರು ಸಾಲಿಯವರ ಸಮಗ್ರ ಕಾವ್ಯ ಪ್ರಕಟಿಸಿದ್ದಾರೆ. 1944ರಲ್ಲಿಯೇ ಅನುವಾದ ಪೂರ್ಣಗೊಂಡಿದ್ದರೂ ಹಿಂಜರಿಕೆಯಿಂದ ಪ್ರಕಟಣೆ ಕಾಣದೆ ಹಸ್ತಪ್ರತಿಯಾಗಿಯೇ ಉಳಿದಿದ್ದ ಮೇಘದೂತವು ಮೊದಲ ಬಾರಿಗೆ ಪ್ರಕಟಣೆಯ ಭಾಗ್ಯ ಕಂಡಿದೆ. ‘ಕಾಲಿದಾಸನ ಅಂತರಂಗ ಮತ್ತು ಕಾವ್ಯರಂಗವನ್ನು ಸಂವೇದನಶೀಲ ಸಾಲಿಯವರು ಏಕಹೃದಯರಾಗಿ ಅರಿತಿದ್ದರು. ಮೂಲ ಭಾವ ಮತ್ತು ಕಾವ್ಯಕ್ಕೆ ಎಲ್ಲಿಯೂ ವ್ಯತ್ಯಯ ಬರದಂತೆ ಸಹೃದಯ ಭಾವದಿಂದ ಮೇಘದೂತವನ್ನು ಕನ್ನಡಿಸಿದ್ದಾರೆ. ಕವಿಗೌರವ, ಕಾವ್ಯಪ್ರೇಮ, ಸಂಸ್ಕೃತಜ್ಞಾನ, ಕನ್ನಡನಿಷ್ಠೆ, ಗೀತಾತ್ಮಕತೆಗಳುನ್ನು ಮೇಳವಿಸಿ ಸಾಲಿಯವರು ನೀಡಿದ ‘ಮೇಘದೂತ’ವು 1944ರಲ್ಲಿಯೇ ಪ್ರಕಟವಾಗಿದ್ದರೆ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮಹತ್ವದ ದಾಖಲೆಯಾಗಿ ಉಳಿಯುತ್ತಿತ್ತು’ ಎಂದು ಪುಸ್ತಕವನ್ನು ಸಂಪಾದಿಸಿದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಅಚ್ಚಗನ್ನಡ ಪದಗಳ ಬಳಕೆ ಈ ಮೇಘದೂತದ ವಿಶೇಷ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books