ಸಂವಿಧಾನ ಜನ ಮಿಡಿತ-ನಾಡಿಮಿಡಿತ

Author : ಅಮ್ಮಸಂದ್ರ ಸುರೇಶ್

Pages 132

₹ 140.00




Year of Publication: 2023
Published by: ಮಹಿಮಾ ಪ್ರಕಾಶನ
Address: ಕೃಷ್ಣಮೂರ್ತಿಪುರಂ, ಮೈಸೂರು 570004
Phone: 9448759815

Synopsys

ಸಂವಿಧಾನ : ನಾಡಿಮಿಡಿತ-ಜನಮಿಡಿತ ಕೃತಿಯು ಸಂವಿಧಾನದ ಐತಿಹಾಸಿಕ ಹಿನ್ನೆಲೆಯಿಂದಿಡಿದು ಸಂವಿಧಾನ ರಚನೆಯ ಮೂಲಕ ಇತ್ತೀಚಿನ ಸಂವಿಧಾನದ ತಿದ್ದುಪಡಿಯವರೆಗಿನ ಪ್ರಮುಖ ಘಟ್ಟಗಳ ಮೇಲೆ ಬೆಳಕು ಚಲ್ಲುತ್ತದೆ. ಭಾರತೀಯರಿಗಾಗಿ ಸಂವಿಧಾನವೊAದನ್ನು ರಚಿಸಬೇಕೆಂಬ ಒತ್ತಡಕ್ಕೆ ಮಣಿದ ಬ್ರಿಟಿಷ್ ಇಂಡಿಯಾ ಸರ್ಕಾರವು ಈ ನಿಟ್ಟಿನಲ್ಲಿ ಸ್ವಾತಂತ್ರö್ಯ ಘೋಷಣೆಗೂ ಹಿಂದಿನಿAದಲೇ ಹಲವಾರು ಪ್ರಯತ್ನಗಳನ್ನು ನಡೆಸಿತು. ಈ ನಿಟ್ಟಿನಲ್ಲಿ ಹಲವು ಆಯೋಗಗಳನ್ನು ನೇಮಿಸಿ, ಸಲಹೆಗಳನ್ನು ನೀಡುವಂತೆ ತಿಳಿಸಿತು. ಈ ಆಯೋಗಗಳ ಕುರಿತು ಸಹ ಈ ಕೃತಿ ವಿವರಗಳನ್ನು ಒದಗಿಸುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯು ಅಸ್ಥಿತ್ವಕ್ಕೆ ಬರುವ ಮೊದಲಿನಿಂದಲೇ ಭಾರತೀಯರಿಗಾಗಿ ರಚಿಸುವ ಸಂವಿಧಾನದ ಕುರಿತು ಬ್ರಿಟಿಷ್ ಸರ್ಕಾರ ನೇಮಿಸಿದ್ದ ಆಯೋಗಗಳನ್ನು ಭೇಟಿ ಮಾಡಿ, ಚರ್ಚಿಸಿ, ಭಾರತೀಯರಿಗೆ ಎಂತಹ ಸಂವಿಧಾನದ ಅವಶ್ಯಕತೆ ಇದೆ ಎಂಬುದನ್ನು ಸಂಬAಧಿಸಿದ ಆಯೋಗಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡಿದರು. ಈ ಎಲ್ಲಾ ಪ್ರಯತ್ನಗಳನ್ನು ಸಂಕ್ಷಿಪ್ತವಾಗಿ ದಾಖಲಿಸುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ. ಸಂವಿಧಾನದ ಐತಿಹಾಸಿಕತೆಯಿಂದ ಹಿಡಿದು ಇತ್ತೀಚಿನ ಸಂವಿಧಾನ ತಿದ್ದುಪಡಿಯವರೆಗೂ ಸಂಪೂರ್ಣವಾದ ಮಾಹಿತಿಯನ್ನು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಈ ಕೃತಿ ಕಟ್ಟಿಕೊಟ್ಟಿದೆ. ಭಾರತದಲ್ಲಿ ಸಾಂವಿಧಾನಿಕ ಬೆಳವಣಿಗೆ, ಸಂವಿಧಾನದ ಐತಿಹಾಸಿಕ ಹಿನ್ನೆಲೆ, ಸಂವಿಧಾನದ ಪೀಠಿಕೆ, ಸಂವಿಧಾನದ ಸಂಕ್ಷಿಪ್ತ ರೂಪ, ವೈಶಿಷ್ಟö್ಯಗಳು, ಆಶಯಗಳು, ಭಾಗಗಳು, ಪ್ರಮುಖ ಅನುಚ್ಚೇದಗಳು, ತಿದ್ದುಪಡಿ ಪ್ರಕ್ರಿಯೆ ಹಾಗೂ ಪ್ರಮುಖ ತಿದ್ದುಪಡಿಗಳ ಕುರಿತಾದ ಒಳನೋಟವನ್ನು ಈ ಕೃತಿ ಒದಗಿಸುತ್ತದೆ.

About the Author

ಅಮ್ಮಸಂದ್ರ ಸುರೇಶ್

ಅಮ್ಮಸಂದ್ರ ಸುರೇಶ್  ಅವರು ಮೂಲತಃ  ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರು ಅಮ್ಮಸಂದ್ರ ಪೂರೈಸಿ, ಪದವಿ (ಪತ್ರಿಕೋದ್ಯಮ,ಮನೋವಿಜ್ಞಾನ ಮತ್ತು ಐಚ್ಛಿಕ ಕನ್ನಡ)-ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರಿನಲ್ಲಿ, ಹಾಗೂ  ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸೈನ್ಸ್ ಇನ್ ಕಮ್ಯುನಿಕೇಷನ್ಸ್, ಬೆಂಗಳೂರು ವಿಶ್ವವಿದ್ಯಾಲ  ಪೂರ್ಣಗೊಳಿಸಿದರು. ಪಿ,ಹೆಚ್ ಡಿಯನ್ನು   ಮಾಧ್ಯಮ ತಜ್ಞರಾದ ಪ್ರೊ.ಎನ್ ಉಷಾರಾಣಿಯವರ ಮಾರ್ಗದರ್ಶನದಲ್ಲಿ “ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ವರದಿ ಹಾಗೂ ಇನ್ನಿತರೆ ಬರಹಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ...

READ MORE

Related Books