ಗುರುದೇವ ಮತ್ತು ಮಹಾತ್ಮ

Author : ಜಿ. ರಾಮನಾಥ್ ಭಟ್

Pages 432

₹ 300.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/0

Synopsys

‘ಗುರುದೇವ ಮತ್ತು ಮಹಾತ್ಮ’ ರವೀಂದ್ರನಾಥ ಠಾಕೂರ್ ಮತ್ತು ಮಹಾತ್ಮ ಗಾಂಧಿಯವರ ನಡುವಿನ ವಿಚಾರ ವಿನಿಮಯಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಈ ಕೃತಿಯನ್ನು ಲೇಖಕ ರಾಮನಾಥ ಭಟ್ ಜಿ ಅವರು ರಚಿಸಿದ್ದಾರೆ. ಎರಡು ಮೇರು ವ್ಯಕ್ತಿತ್ವಗಳು ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಮತ್ತು ಭಿನ್ನಾಭಿಪ್ರಾಯದ ಜೊತೆಗೆ ಕಟ್ಟಿಕೊಂಡಿದ್ದ ಸಹಭಾಳ್ವೆಯ ಆದರ್ಶಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ತಮ್ಮಜೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಗಾಂಧೀಜಿ ಕಾಂಗ್ರೇಸಿನ ಮೂಲಕ ರಾಜಕೀಯ ಕ್ಷೇತ್ರದಲ್ಲಿ, ಗುರುದೇವ ರವೀಂದ್ರನಾಥರು ತಮ್ಮ ಸ್ಫೂರ್ತಿದಾಯಕ ಕೃತಿಗಳ ಮೂಲಕ ಸಾಂಸ್ಕೃತಿಕಕ ರಂಗದಲ್ಲಿ ನಡೆಸಿದ ಕಾರ್ಯಚಟುವಟಿಕೆಗಳು ಮತ್ತು ಇವರಿಬ್ಬರ ನಡುವಿನ ಸ್ನೇಹ, ಗೌರವ ಜೊತೆಗೆ ಭಿನ್ನಾಭಿಪ್ರಾಯಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿದಾಯಕವಾದವುಗಳಾಗಿದ್ದವು. ತಮ್ಮ ಅಭಿಪ್ರಾಯಗಳನ್ನು ಕೆಲವೊಮ್ಮೆ ನಿಷ್ಠೂರವೆನಿಸುವಂತಿದ್ದರೂ ಅವರು ಎಚ್ಚರಿಕೆಯಿಂದಲೇ, ಅದೇ ರೀತಿ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಕುಂದುಂಟಾಗದಂತೆ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಎಂದಿಗೂ ಸಂಕುಚಿತ ರಾಷ್ಟ್ರೀಯತೆ ಇರಲಿಲ್ಲ. ಅವರು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ-ಪರಂಪರೆಯ ಉತ್ತರಾಧಿಕಾರಿಗಳು ಮತ್ತು ಪ್ರತಿನಿಧಿಗಳು ಆಗಿದ್ದರು. ಇವರ ನಡುವಿನ ಗಂಭೀರ ರೀತಿಯ ವಿಚಾರ ವಿನಿಮಯಗಳ ಸಂಕಲನವೇ ಈ ಕೃತಿ.

About the Author

ಜಿ. ರಾಮನಾಥ್ ಭಟ್

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಜಿ. ರಾಮನಾಥ ಭಟ್ ಅವರು ಮೈಸೂರು ನಿವಾಸಿಯಾಗಿದ್ದಾರೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ (1959) ಪಡೆದಿರುವ ಅವರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದರು. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವಯಂ ನಿವೃತ್ತರಾದರು. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಅವರು ಅರುವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದತ್ತ ಆಕರ್ಷಿತರಾದರು. ಸರ್ಕಾರಿ ಕೆಲಸದಲ್ಲಿದ್ದರೂ ರವೀಂದ್ರನಾಥ ...

READ MORE

Related Books