ಜರ್ಮನ್ ಸಿದ್ಧಾಂತ

Author : ವಿ.ಎನ್.ಲಕ್ಷ್ಮೀನಾರಾಯಣ

Pages 224

₹ 220.00




Year of Publication: 2021
Published by: ಕ್ರಿಯಾ ಪ್ರಕಾಶನ
Address: # 12, ತಾನಪ್ಪ ಗಾರ್ಡನ್, 18ನೇ ಅಡ್ಡರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 08022234369

Synopsys

ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಏಂಗಲ್ಸ್ ಅವರು ಜಂಟಿಯಾಗಿ ಬರೆದ ಕೃತಿಯನ್ನು ಲೇಖಕ ವಿ.ಎನ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ ಫ್ರೆಡೆರಿಕ್ ಏಂಗೆಲ್ಸ್‌ ಅವರ ಜನ್ಮ ದ್ವಿಶತಮಾನೋತ್ಸವದ ಅಂಗವಾಗಿ ಈ ಕೃತಿ ಪ್ರಕಟಗೊಂಡಿದ್ದು, ಈ ಪುಸ್ತಕವು ಮಾರ್ಕ್ಸ್ ಮತ್ತು ಎಂಗೆಲ್ಸರು 'ಚಾರಿತ್ರಿಕ ಭೌತವಾದ' ಮತ್ತು 'ವೈಜ್ಞಾನಿಕ ಭೌತವಾದ'  ಎಂದರೇನೆಂಬುದನ್ನು ಜರ್ಮನ್ ಭಾವನಾವಾದದ ಖಂಡನೆಯ ಮೂಲಕ ಮಂಡಿಸುವ,  ಫಾಯರ್ಬಾಖ್‍ ನ ಜಡಭೌತವಾದವನ್ನು ಟೀಕಿಸಿ ಅದರ ಮಿತಿಗಳನ್ನು ಸ್ಪಷ್ಟವಾಗಿ ವಿವರಿಸುವ ಪುಸ್ತಕ.

About the Author

ವಿ.ಎನ್.ಲಕ್ಷ್ಮೀನಾರಾಯಣ
(06 May 1948)

ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ (ಜನನ: 06-05-1948) ಲಾಯಲಾಪುರ ಗ್ರಾಮದವರು.  ಸಾಹಿತ್ಯ, ತತ್ವಶಾಸ್ತ್ರ, ಸಿನಿಮಾಕಲೆ, ಅನುವಾದ ಮತ್ತು ಎಡಪಂಥೀಯ ರಾಜಕೀಯದಲ್ಲಿ ಗಂಭೀರ ಆಸಕ್ತಿ. ‘ಆನೆ ಬಂತೊಂದಾನೆ’ (ಜಾನಪದ ಶಿಶುಗೀತೆಗಳು) ‘ಕನ್ನಡ ಕಲಿಯಿರಿ’ ( ವಯಸ್ಕರ ಶಿಕ್ಷಣ) ‘ನಿರಂತರ’ (ಸಾಹಿತ್ಯ ವಿಮರ್ಶೆ) ‘ಗಾಂಪ ಮಂಡಲ’ (ವಿಡಂಬನೆ) ‘ಕ್ಯಾಪ್ಟನ್ನನ ಮಗಳು’ (ಅನುವಾದ) ‘ಎರಡು ಕಣ್ಣು ಸಾಲದು’ (ಸಿನಿಮಾ ಕಲಾಮೀಮಾಂಸೆ) 'ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!' (ಸಹ ಅನುವಾದ) ಪ್ರಕಟಿತ ಕೃತಿಗಳು. ಮಾರ್ಕ್ಸ್ ನ ‘ಕ್ಯಾಪಿಟಲ್’ ಕೃತಿಯ ಅನುವಾದ ಕಾರ್ಯದಲ್ಲಿ ಇತರರೊಂದಿಗೆ ಸಹಯೋಗ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ...

READ MORE

Related Books