1.60ಲಕ್ಷ ಶಬ್ದಾರ್ಥಗಳ ನಿಘಂಟು: ವಿ. ಕೃಷ್ಣರ ಶ್ರದ್ಧೆ ಪ್ರಶಂಸೆ

Date: 21-11-2020

Location: ಬೆಂಗಳೂರು


ಬುಕ್‌ ಬ್ರಹ್ಮ ಹಾಗೂ ವಸಂತ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ವಿ. ಕೃಷ್ಣ ಅವರ ‘ಕನ್ನಡ - ಇಂಗ್ಲಿಷ್ ಸಂಕ್ಷಿಪ್ತ ನಿಘಂಟು’ ಪುಸ್ತಕವನ್ನು ಬುಕ್‌ ಬ್ರಹ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಬಿಡುಗಡೆ ಮಾಡಲಾಯಿತು.

ನಿಘಂಟು ಬಿಡುಗಡೆ ನಂತರ ಮಾತನಾಡಿದ ಶಿಕ್ಷಣ ತಜ್ಞ ಡಾ. ಕೆ. ಇ. ರಾಧಾಕೃಷ್ಣ “ಕೊರೊನಾದ ಲಾಕ್‌ಡೌನ್‌ ಸಂದರ್ಭದಲ್ಲಿ ಕನ್ನಡ ಪುಸ್ತಕಲೋಕ ಹೆಚ್ಚು ಕ್ರಿಯಾಶೀಲವಾಗಿತ್ತು. ಇದಕ್ಕೆ ಉತ್ತಮ ಉದಾಹರಣೆ ‘ಕನ್ನಡ - ಇಂಗ್ಲಿಷ್ ಸಂಕ್ಷಿಪ್ತ ನಿಘಂಟು’ ರಚನೆ. ಒಂದು ವಿಶ್ವವಿದ್ಯಾಲಯ ಮಾಡಬೇಕಿದ್ದ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ ವಿ. ಕೃಷ್ಣ ಅವರು ಮಾಡಿದ್ದಾರೆ. ಅವರು ಶುದ್ಧಾಂಗ ತಪಸ್ವಿ. ತಮ್ಮನ್ನು ಏಕೀಮುಖಿ ಲೋಕಕ್ಕೆ ಅರ್ಪಿಸಿಕೊಂಡು 1.60 ಲಕ್ಷ ಪದಗಳ ನಿಘಂಟುವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕರ್ತೃ, ಸಂಪಾಕದರಾಗಿ ಕನ್ನಡ-ಇಂಗ್ಲಿಷ್ ಪದಗಳಿಗೆ ಸ್ಪಷ್ಟವಾದ ಅರ್ಥ ಜೀವಂತಿಕೆ ನೀಡಿದ್ದಾರೆ" ಎಂದು ನಿಘಂಟುವಿನ ಮಹತ್ವ ಹಾಗೂ ನಿಘಂಟು ತಜ್ಞ ವಿ.ಕೃಷ್ಣ ಅವರ ಕಾರ್ಯವನ್ನು ಶ್ಲಾಘಿಸಿದರು.
ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ನಿಘಂಟು ತಜ್ಞ ವಿ. ಕೃಷ್ಣ, ವಸಂತ ಪ್ರಕಾಶನದ ಮುರಳಿ ಶ್ರೀನಿವಾಸನ್, ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

MORE NEWS

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...