ನಿರ್ದೇಶಕ,  ಸಾಹಿತಿ ಟಿ. ಎನ್. ಸೀತಾರಾಂ ಅವರಿಗೆ 'ಪಂಚಮಿ ಪುರಸ್ಕಾರ 2026'

Date: 29-12-2025

Location: ಬೆಂಗಳೂರು


ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪುರಸ್ಕಾರ 2026' ಕ್ಕೆ ಕನ್ನಡದ ಹಿರಿಯ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ, ನಟ, ನಾಟಕಕಾರ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ.

ಜನವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವದನ ಒಂದು ಲಕ್ಷದೊಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್‌.ಪಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಪ್ರಶಸ್ತಿ ಸಮಿತಿಯ ಸಂಚಾಲಕ ಜನಾರ್ದನ ಕೊಡವೂರು​, ಉಪಾಧ್ಯಕ್ಷ ಮಧುಸೂದನ ಹೇರೂರು ಉಪಸ್ಥಿತರಿದ್ದರು.

 

 

MORE NEWS

ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನಲ್ಲಿ ಶತಮಾನದ ಕಾವ್ಯ ಕಾರ್ಯಕ್ರಮ

29-12-2025 ಬೆಂಗಳೂರು

ಬೆಂಗಳೂರು: ಬೀಟಲ್‌ ಬುಕ್‌ ಶಾಪ್‌ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನ...

ಚಿನ್ನಮಣೀಸ್ ವರ್ಲ್ಡ್ ; ಹಲವು ಅಚ್ಚರಿಗಳ ಜಗತ್ತು

29-12-2025 ಬೆಂಗಳೂರು

ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋ...

ತುಮಕೂರು: ಡಿ. 29, 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಕಲ ಸಿದ್ಧತೆ

29-12-2025 ತುಮಕೂರು

ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ...