‘ರಂಗಪಯಣ’ಕ್ಕೆ 12ನೇ ವಸಂತ, ರಂಗ ಬೆಳ್ಳಿ ಕಿರಣಕ್ಕೆ 25ನೇ ವಸಂತ


ಕನ್ನಡ ರಂಗಭೂಮಿಯಲ್ಲಿ ‘ಗುಲಾಬಿ ಗ್ಯಾಂಗ್’ ಕಟ್ಟಿ ನಾಯಕಿಯಾದ ನಯನ.ಜೆ.ಸೂಡ ಅವರು 2021ಕ್ಕೆ ಜುಲೈ 31ಕ್ಕೆ ರಂಗಭೂಮಿ ಪ್ರವೇಶಕ್ಕೆ 25 ವರ್ಷ ಹಾಗೂ ಅವರು ಕಟ್ಟಿದ ‘ರಂಗಪಯಣ’ಕ್ಕೆ 12 ವರ್ಷಗಳು ತುಂಬಿವೆ. ಅವರ ಕಲಾಬದುಕಿನ ಸಣ್ಣ ಪರಿಚಯವೇ ಈ ಬರಹ. ಜೊತೆಗೆ, ಕಲಾವಿದೆ ನಯನ ಜೆ.ಸೂಡ ಅವರ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಅವರ ಆಪ್ತರು ಬರೆದ ಲೇಖನ ನಿಮ್ಮ ಓದಿಗಾಗಿ.

ಹೌದು, ರಂಗಭೂಮಿಯಲ್ಲಿ ಬೆಳ್ಳಿ ಕಿರಣವಾಗಿ ಹೆಜ್ಜೆ ಇಟ್ಟ ನಯನ ಅವರಿಗೆ ಬೆಳ್ಳಿ ಮಹೋತ್ಸವದ ಸಂಭ್ರಮ. 2021ರ ಜುಲೈ 31 ಕ್ಕೆ ನಯನ.ಜೆ.ಸೂಡ ಅವರು ‘ರಂಗಪಯಣ’ ಕಟ್ಟಿ 12 ವರ್ಷ ಪೂರೈಸುತ್ತದೆ. ಇದಕ್ಕಿಂತ ಒಂದು ಕೈ ಮೇಲಿನ ಸಂಭ್ರಮ ನಯನ ಅವರ ರಂಗಭೂಮಿಯ ಪ್ರವೇಶಕ್ಕೆ ಕೂಡ 25 ವಸಂತವಾಗುತ್ತದೆ. ಜೊತೆಗೆ, ಜುಲೈ 31 ನಯನ ಅವರ ಜನ್ಮ ದಿನ ಕೂಡ.

ದಕ್ಷಿಣ ಕನ್ನಡದ ‘ಹೆಬ್ರಿ’ ಯಲ್ಲಿ ಜನಿಸಿದ ನಯನ, ಬೆಂಗಳೂರಿನ ಬಿ.ನಾರಾಯಣ ಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರಿಗೆ 6 ವರ್ಷ ವಯಸ್ಸು. 2ನೇ ತರಗತಿಯಾಗಿದ್ದಾಗ ರಂಗ ಗುರುಗಳಾದ ಶ್ರೀ ಯುತ ಸಿ. ಲಕ್ಷ್ಮಣ್ ಅವರು ‘ಬಾರೆ ಪುಟ್ಟಿ ನಾಟ್ಕ ಮಾಡ್ತಿಯೇನೆ’ ಎಂದು ಕೇಳಿದ ಮಾತ್ರಕ್ಕೆ ಚಂಗನೆ ಹಾರಿ ರಂಗಭೂಮಿಗೆ ಕಾಲಿಟ್ಟರು. ಹೀಗೆ, ಪುಟ್ಟಿಯಾಗಿ, ಪುಟ್ಟ ಹೆಜ್ಜೆಯೊಂದಿಗೆ ಕಾಲಿಟ್ಟ ನಯನ, ಇಂದು ರಂಗಭೂಮಿಯಲ್ಲಿ 25 ವಸಂತ ಪೂರೈಸಿದ್ದಾರೆ. ಸದಾ ಕಾಲ ರಂಗಭೂಮಿಯ ತುಡಿತ ಹೊಂದಿದ್ದ ನಯನ.ಜೆ.ಸೂಡ ‘ನನ್ನ ಗೋಪಾಲ’ ನಾಟಕದಲ್ಲಿ ಬಾಲ್ಯ ನಟ/ನಟಿ ಯಾಗಿ ಕಾಣಿಸಿಕೊಂಡು ‘ರಂಗ ಕಹಳೆ’ ತಂಡದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿ ನಂತರ ಶ್ರೀಯುತ ಆಂಜನೇಯ ಅವರು ನಿರ್ದೇಶಿಸಿದ ‘ಕೆಂಪೇಗೌಡರ ಜೀವನಾಧಾರಿತ ನಾಟಕ’ ದಲ್ಲಿ ಸೊಸೆ ಲಕ್ಷ್ಮೀ ಪಾತ್ರದಲ್ಲಿ ಗುರುತಿಸಿಕೊಂಡು, ನಂತರ ತಮ್ಮದೇ ಆದ ‘ರಂಗಪಯಣ’ ತಂಡ ಕಟ್ಟಿದರು. ಅಂದಿನಿಂದ ಪಯಣ ನಿಲ್ಲದೆ ಇಂದಿಗೂ ಕೂಡ ಸಾಗುತ್ತಾ 12 ವರ್ಷಗಳನ್ನು ಪೂರೈಸಿ, 13 ನೇ ವರ್ಷಕ್ಕೆ ಕಾಲಿಡುತ್ತಿದೆ.

ಹೀಗೆ ತಂಡ ಕಟ್ಟಿ ಸಾಗುತ್ತಿದ್ದ ದಿನಗಳಲ್ಲಿ ರಂಗಕರ್ಮಿ ರಾಜ್ ಗುರು ಅವರನ್ನು ಪ್ರೇಮಿಸಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಪ್ರಕಾರ ಗುರು ಹಿರಿಯರ ಆರ್ಶೀವಾದದೊಂದಿಗೆ ವಿವಾಹವಾದರು. ಈ ಇಬ್ಬರ ನೇತೃತ್ವದಲ್ಲಿ ಅನೇಕ ನಾಟಕಗಳನ್ನು ಕಟ್ಟಿ ಅದರಲ್ಲಿಯೂ ಕೂಡ ಅಭಿನಯಿಸಿದರು. ಚಂದ್ರಗಿರಿ ತೀರದಲ್ಲಿ, ಹೇ ರಾಮ್, ಗುಲಾಬಿ ಗ್ಯಾಂಗ್ ಭಾಗ-1 ಮತ್ತು ಗುಲಾಬಿ ಗ್ಯಾಂಗ್ ಭಾಗ-2, ಭೂಮಿ, ಶ್ರದ್ಧಾ, ಅಕ್ಷರದವ್ವ ಇವರ ಪ್ರಸಿದ್ಧ ನಾಟಕಗಳು.

ಇಲ್ಲಿಯ ತನಕ ಸರಿಸುಮಾರು 800 ರಿಂದ 900 ವೇದಿಕೆಗಳಲ್ಲಿ ಹಲವಾರು ನಾಟಕಗಳಲ್ಲಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದಲ್ಲದೇ ಕರ್ನಾಟಕ ಹೊರತು ಪಡಿಸಿ ಮುಂಬೈ, ದೆಹಲಿಗಳಲ್ಲೂ ನಾಟಕ ಪ್ರಯೋಗ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಂಗಪಯಣ ತಂಡದ ಮೂಲಕ ಆಗಸ್ಟ್ ತಿಂಗಳಲ್ಲಿ ಪ್ರದರ್ಶನಗೊಳ್ಳಲು ಮಗಳಿಗಾಗಿ ‘ಹೆಸರಿಡದ ನಾಟಕ’ವೊಂದು ತಯಾರಾಗುತ್ತಿದೆ. ಜೊತೆಗೆ ‘ಪೂಲನ್ ದೇವಿ’ ಎಂಬ ನಾಟಕಕ್ಕೂ ಬಣ್ಣ ಹಚ್ಚಲಿದ್ದಾರೆ. ಜುಲೈ 31ಕ್ಕೆ ಮತ್ತೊಂದು ಹೊಸ ನಾಟಕ ಬೇಲೂರು ರಘುನಂದನ್ ಅವರ ‘ಸಿಂಗಲ್ ಪೇರೆಂಟ್" ಎಂಬ ನಾಟಕದ ಕಥೆ ಸಿದ್ಧವಾಗುತ್ತಿದೆ. ಅದರಲ್ಲಿಯೂ ಕೂಡ ಒಂದೊಳ್ಳೆ ಮತ್ತು ಸಾಮಾಜಿಕ ಸಂದೇಶ ನೀಡುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗೆ, ಒಂದಿಲ್ಲೊಂದು ನಾಟಕಗಳಲ್ಲಿ, ರಂಗಭೂಮಿ ಕೆಲಸಗಳಲ್ಲಿ ತೊಡಗಿ ಕಾರ್ಯ ನಿರ್ವಹಿಸುತ್ತಿರುವ ತುಂಬು ಪ್ರತಿಭೆಗೆ ಈ ಬೆಳ್ಳಿ ಮಹೋತ್ಸವ ಮತ್ತಷ್ಟು ಹುರುಪು ತುಂಬಲಿ. ನಯನ.ಜೆ.ಸೂಡ ಅವರ ಮುಂದಿನ ಜೀವನ ಮತ್ತು ಕಾರ್ಯಗಳಿಗೆ ಶುಭವಾಗಲಿ ಎಂದು ಹಾರೈಸುತ್ತಾ ಜನ್ಮ ದಿನದ ಶುಭಾಶಯಗಳು- ರಂಗ ಬೆಳ್ಳಿ ಕಿರಣಕ್ಕೆ...

ವಿವಿಧ ಕಾರ್ಯಕ್ರಮಗಳಲ್ಲಿ ಕಲಾವಿದೆ ನಯನ ಜೆ.ಸೂಡ

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...