ಸಮುದಾಯಿಕ ಬಿಕ್ಕಟ್ಟುಗಳ ಪರಿಹಾರ, ವೈಯಕ್ತಿಕ ಬದಲಾವಣೆಯಿಂದ ಪ್ರಾರಂಭವಾಗಬೇಕು : ಶಿವಕುಮಾರ ಮಾವಲಿ


"ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು" ಎನ್ನುತ್ತಾರೆ ಲೇಖಕ ಶಿವಕುಮಾರ ಮಾವಲಿ . ಅವರ ಪ್ರೇಮಪತ್ರದ ಆಫೀಸು ಮತ್ತು ಅವಳು ಕತಾ ಸಂಕಲನಕ್ಕೆ ಬರೆದ ಲೇಖಕರ ಮಾತುಗಳು ನಿಮ್ಮ ಓದಿಗಾಗಿ....


ಹಾಗೆ ನೋಡಿದರೆ ನಮ್ಮೆಲ್ಲರ ಬದುಕು ಮತ್ತಷ್ಟು ಗಟ್ಟಿಯಾಗುವುದು 'ಸಹಿಷ್ಣುತೆ'ಯಿಂದಲೇ ಹೊರತು, ಪ್ರೀತಿಯಿಂದಲ್ಲ ಎಂಬ ವಾದವೂ ಇದೆ. ಆದರೆ ನಾವು ಸಹಿಷ್ಣುಗಳಾಗುವುದೆಂದರೆ, ನಮ್ಮಲ್ಲಿರುವ ಪ್ರೀತಿಯನ್ನು ಹೊರ ಹಾಕುವುದು ಎಂದೇ ಅರ್ಥ. ಇಲ್ಲಿ ಪ್ರೇಮದ ಕತೆಗಳಿವೆ, ವಿರಹದ ಕತೆಗಳಿವೆ, ಸಂಬಂಧಗಳ ತಾಕಲಾಟದ ಕತೆಗಳಿವೆ. ಇವೆಲ್ಲ ವೈಯಕ್ತಿಕವೇನೋ ಅನ್ನಿಸಬಹುದು. ಆದರೆ, ನಾವು ದೇಶದ ಬಗ್ಗೆ ಯೋಚಿಸಿದಷ್ಟೇ ನಮ್ಮ ದೇಹದ ಬಗ್ಗೆಯೂ ಯೋಚಿಸಬೇಕು. ಎಲ್ಲಾ ಸಮುದಾಯಿಕ ಬಿಕ್ಕಟ್ಟುಗಳ ಪರಿಹಾರ,ವೈಯಕ್ತಿಕ ಬದಲಾವಣೆಯಿಂದಲೇ ಪ್ರಾರಂಭವಾಗಬೇಕಿರುತ್ತದೆ. ಅರಿವಿನಂದಲೇ, ಇಲ್ಲಿನ ಸಣ್ಣ ಕತೆಗಳಲ್ಲಿನ ಪಾತ್ರಗಳು,ವೈಯಕ್ತಿಕ ನೆಲೆಯಲ್ಲಿ ಎದುರಾಗುವ ಸಂದಿಗ್ದಗಳು, ನಮ್ಮೊಳಗನ್ನು ಪ್ರಶ್ನಿಸುತ್ತವೆ.
ಕೆಲವೊಮ್ಮೆ ನಾಟಕೀಯತೆ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಹಾಗೆ ಕತೆ ಕಟ್ಟುವಾಗ ಓದುಗರಲ್ಲಿ ಒಂದು ವಿಸ್ಮಯ ಹುಟ್ಟಿಸುತ್ತಲೇ, ಅವು ವೈಯಕ್ತಿಕವಾಗಿ ಅವರಿಗೆ ಏನನ್ನೋ ನೆನಪಿಸುವಂತಿರಬೇಕು ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ಇಲ್ಲಿನಕತೆಗಳಲ್ಲಿ ತಂದಿದ್ದೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು. ಮುಂದುವರೆಯಬೇಕು. ಬಹುತೇಕ ಕತೆಗಳಲ್ಲಿ ಪಾತ್ರಗಳಿಗೆ ಹೆಸರು ನೀಡದೆ ಸರ್ವನಾಮಗಳನ್ನು ಬಳಸಿದ್ದೇನೆ. ಪಾತ್ರಗಳಿಗೆ ಯಾವ ಹೆಸರು ಕೊಡದಿದ್ದರೂ ನಡೆಯುತ್ತದೆ. ಹಾಗೆಯೇ ಕತೆಗಳಲ್ಲಿ ಬರುವ 'ನಾನು', ಯಾರಾದರೂ ಆಗಬಹುದು ಅಥವಾ ಯಾರೂ ಆಗದೆಯೂ ಇರಬಹುದು. ಒಟ್ಟಿನಲ್ಲಿ ಎಲ್ಲರ ಎದೆಯೊಳಗೆ ಹೋಲ್ ಸೇಲಾಗಿ ಇರುವ ಪ್ರೇಮವೆಂಬ ಸರಕಿನ ವ್ಯಾಪಾರ ಜಗದೊಳಗೆ ನಡೆಯುತ್ತಲೇ ಇರುತ್ತದೆ. ದ್ವೇಷವು ವೈಯಕ್ತಿಕ ನೆಲೆಯಿಂದ ಸಮೂಹದ ನೆಲೆಗೆ ತಿರುಗಿದಾಗ ಅನಾಹುತ ಉಂಟು ಮಾಡಿದರೆ, ಪ್ರೇಮವು ವೈಯಕ್ತಿಕ ನೆಲೆಯಲ್ಲಿದ್ದಾಗಲೂ ಉಪಕಾರಿ ಮತ್ತು ಸಮೂಹದ ನೆಲೆಗೆ ಬಂದಾಗಲೂ ಪರೋಪಕಾರಿಯಾಗಿರುತ್ತದೆ. ಅಂಥ ಪ್ರೇಮದ ಬಗ್ಗೆ ಓದುವುದು, ಬರೆಯುವುದು, ಮಾತನಾಡುವುದು ಎಲ್ಲವೂ ಒಂದು ಬಗೆಯ ಪ್ರೇಮಕಾರ್ಯಗಳೇ ಆಗಿರುತ್ತವೆ.

ಪುಸ್ತಕದ ಪ್ರಕಟಣೆಯ ಎಲ್ಲಾ ಹಂತಗಳಲ್ಲಿಯೂ ಸೂಕ್ತ ಮಾರ್ಗದರ್ಶನ ನೀಡಿದ ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ, ಧರಣಿ ಪ್ರಿಂಟರ್ಸ್ ಹೂವಪ್ಪ, ಪುಟ ವಿನ್ಯಾಸ ಮಾಡಿದ ವಿಕ್ರಮ ವಿಜಯ, ಮುಖಪುಟ ವಿನ್ಯಾಸಕರಾದ ಅರುಣ್ ಕುಮಾರ್.ಜಿ, ಪ್ರಚಾರದ ಎಲ್ಲಾ ಪೋಸ್ಟರ್ ಗಳ ವಿನ್ಯಾಸ ಮಾಡಿದ ಮತ್ತು ನನ್ನ ಛಾಯಾಚಿತ್ರ ತೆಗೆದ ಮನುಕುಮಾರ್ ಕೆ.ಜಿ.,ನಮ್ಮ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಸದಾ ಬೆಂಬಲವಾಗಿ ನಿಲ್ಲುವ ಹೊಂಗಿರಣ ಶಿವಮೊಗ್ಗದ ಎಲ್ಲಾ ಗೆಳೆಯರಿಗೆ ನನ್ನ ಕೃತಜ್ಞತೆಗಳು ಸಲ್ಲಲೇಬೇಕು.

- ಶಿವಕುಮಾರ ಮಾವಲಿ
ಶಿವಕುಮಾರ ಮಾವಲಿ ಅವರ ಲೇಖಕ ಪರಿಚಯಕ್ಕಾಗಿ

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...