ಕನ್ನಡಕ್ಕೆ ಅನನ್ಯ ಅನ್ನಿಸುವ,ಹೊಸ ತಲೆಮಾರಿನ ಅಭಿರುಚಿ ತಿದ್ದುವ ಹಿರಿ-ಕಿರಿಯರ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಬೇರೆ ಪ್ರಕಾಶನದ ಪುಸ್ತಕಗಳನ್ನೂ ಮಾರಾಟ ಮಾಡುವ ಸದುದ್ದೇಶದೊಂದಿಗೆ ಪ್ರಾರಂಭವಾದ ಪ್ರಕಾಶನ ಸಂಸ್ಥೆ ಸಂಗಾತ ಪುಸ್ತಕ.
ಕತೆಗಾರ ಟಿ ಎಸ್ ಗೊರವರ ಅವರು 2018ರಲ್ಲಿ ಗದಗ್ ನ ಗಜೇಂದ್ರಗಡದಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ನೇರವಾಗಿ ಓದುಗರಿಗೆ ಸುಲಭತರದಲ್ಲಿ ಕೃತಿಗಳು ಓದಲು ಸಿಗುವಂತಾಗಬೇಂಕೆಂಬ ಧ್ಯೇಯದೊಂದಿಗೆ ಪ್ರಕಾಶನ ರಂಗಕ್ಕಿಳಿದ ಈ ಸಂಸ್ಥೆಯು ಈಗಾಗಲೇ ಕವಿತೆ,ಕತೆ, ಕಾದಂಬರಿ, ಅನುವಾದ, ಜೀವನ ಚರಿತ್ರೆ, ಸಂಶೋಧನಾ ಕೃತಿಗಳೂ ಸೇರಿ ಒಟ್ಟು 36 ಪುಸ್ತಕಗಳನ್ನು ಪ್ರಕಟಿಸಿದೆ.
ಅಂಚೆ ಮೂಲಕ ಓದುಗರಿಗೆ ಬೇಕಾದ ಕೃತಿಗಳನ್ನು ರಿಯಾಯಿತಿ ದರದಲ್ಲಿ ಅವರ ಮನೆಗೆ ತಲುಪಿಸುವ ‘ಸಂಗಾತ ಪುಸ್ತಕ’ ಓದುವವರು ಇದ್ದೇ ಇದ್ದಾರೆ, ಅವರನ್ನು ನಾವು ಒಳ್ಳೆಯ ಕೃತಿಗಳ ಮೂಲಕ ಭೇಟಿ ಮಾಡಬೇಕಷ್ಟೇ ಎಂಬ ನಿರ್ಧಾರದ ಮೇಲೆ ಕಾರ್ಯಪ್ರವೃತ್ತವಾಗಿದೆ.
Publisher Address
ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Gajendragada Taluk, Gadag District Rajur post – 582 114.
Publisher Contact
©2022 Book Brahma Private Limited.