ಭವ್ಯ ಕಬ್ಬಳಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದವರು. ಎಂಜಿನಿಯರಿಂಗ್ ಪದವೀಧರರಾದ ಅವರು ಜನರಲ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆಗಳ ಬರಹ ಮತ್ತು ಓದು ಅವರ ಇಷ್ಟದ ಹವ್ಯಾಸ.
ದಾರಿ ತುದಿಯ ತಿರುವಿನಲ್ಲಿ
ಅರೆ ಕ್ಷಣದಲ್ಲಿ ಮರೆಯಾದ
ಯಾವುದೋ ನೆರಳು
ಈಗಷ್ಟೆ ಎಚ್ಚರಗೊಂಡು
ಬಾಗಿಲು ತೆರೆದ ನನಗೆ,
ಯಾರಿರಬಹುದೆನ್ನುವುದು ಪ್ರಶ್ನೆಯಷ್ಟೆ!
ಯಾವ ಕುತೂಹಲವೂ ಇಲ್ಲ
ನಿನ್ನೆಯಿಡೀ ಕಾದು ನಿರಾಸೆಗೊಂಡ
ನನ್ನ ಕಣ್ಣು ತಪ್ಪಿಸಿದ ಹೂವು,
ಯಾವಾಗ ಅರಳಿತೆನ್ನುವುದು ಪ್ರಶ್...