Story/Poem

ಕೆ.ಎನ್. ಲಾವಣ್ಯ ಪ್ರಭಾ

ಕವಿ ಕೆ. ಎನ್. ಲಾವಣ್ಯ ಪ್ರಭ ಅವರು ಮೂಲತಃ ಮೈಸೂರಿನವರು. ಅವರು 1971 ನವೆಂಬರ್‌ 02ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ. ಆರ್‌. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಅವರು ‘ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ’ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಇವರ ಹಲವಾರು ಕವಿತೆಗಳು ಕನ್ನಡದ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author

Story/Poem

ಅಂತಃಪುರ ಗೀತೆ

ಓಹ್! ಅಂತೂ ಬಂದಿರಲ್ಲಾ , ಬನ್ನಿ ಬಡಪಾಯಿಯ ನೆನಪಾಯಿತಲ್ಲಾ ಪುಣ್ಯ! ಬನ್ನಿ ಬನ್ನಿ ಬನ್ನಿ ದೊರೆ ಒಳಗೆ ನೀವು ಬರುವ ಹೆಜ್ಜೆ ಸಪ್ಪಳಕ್ಕೆ ನೆಲಹಾಸು ಕಂಪಿಸಿದವಲ್ಲಾ ಹೊರಬಾಗಿಲಿನ ತೋರಣದ ಎಲೆಗಳು, ಕಮಾನಿಗೆ ಹಬ್ಬಿಕೊಂಡ ಬಳ್ಳಿಗಳು, ಕೊಳದ ತಾವರೆಗಳು ಮೊಗವರಳಿಸಿಕೊಂಡು ಸಣ್ಣಗೆ ತೊನೆದಾ...

Read More...