Story/Poem

ಲತಾ ರಮೇಶ ವಾಲಿ

ಲತಾ ರಮೇಶ ವಾಲಿ ಅವರು ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರಿನವರು. ತಂದೆ- ಮಹದೇವಗೌಡರು ತಾಯಿ- ಪುಷ್ಪಾ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸವಣೂರಿನ ಬಿ.ಇ.ಎಸ್. ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು ಸವಣೂರಿನ ಸರಕಾರಿ ಪದವಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಒಲವಿರುವ ಲತಾ ಅವರು 2017ರಲ್ಲಿ ‘ಪರಿಮಳ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಅವರು ಕವಿತೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮನ್ನಾಗಿಸಿಕೊಂಡಿದ್ದಾರೆ.

More About Author

Story/Poem

ಬದಲಾದದ್ದೇನು..?

ಬುದ್ಧ, ಬಸವ, ಭೀಮರ ಕನಸುಗಳು ನಾವು ಶತಮಾನಗಳಿಂದಲೂ ನೊಂದ ಕುಸುಮಗಳು ಅಕ್ಕರೆಯಲಿ ಅಕ್ಷರದ ತುತ್ತನಿತ್ತು ಆರ್ಥಿಕ ಸಬಲೀಕರಣದ ಸ್ವಾಭಿಮಾನದ ಹಾದಿಯಲಿ ನಿತ್ಯ ಜೊತೆ ನಿಂತರು ಇಷ್ಟಾದರೂ ಬದಲಾದದ್ದೇನು? ಇಷ್ಟಾದರೂ ಬದಲಾದದ್ದೇನು?  ಮನುವಿನ ಸಂದೇಶಗಳಂಗಿಯ ಬಣ್ಣವಿರಬೇಕು;ಛದ...

Read More...