ಮಂಜುನಾಥ ನಾಯ್ಕ್
ಲೇಖಕ ಮಂಜುನಾಥ ನಾಯ್ಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯವರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಪ್ರವೃತ್ತಿಯಿಂದ ಸಾಹಿತ್ಯಪ್ರೇಮಿ. ಇವರ 25 ಕಥೆಗಳು ನಾಡಿನ ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 'ಮೌನದೊಡಲಿನ ಮಾತು' ಮತ್ತು 'ಅನ್ನ ಕದ್ದವನು' ಕಥಾಸಂಕಲನಗಳು.
More About Author