Story/Poem

ಸಿದ್ದು ಯಾಪಲಪರವಿ

ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ  ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ.  1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ, ಇವರ ಬದುಕಿನ ಸಾಧನೆಗಳನ್ನು ಆಧರಿಸಿ ಸಿಕಾ ಅವರು ಬರೆದ ಬ್ಯಾಸರಿಲ್ಲದ ಜೀವ ಪ್ರಕಟಗೊಂಡಿದೆ. 

More About Author

Story/Poem

ಈ  ರಾತ್ರಿ ಎಂದಿನಂತಲ್ಲ 

ಹಿಂದೆ ಕಳೆದ ರಾತ್ರಿಗಳ ತುಂಬಾ ಬರೀ ಕರಾಳ ಆತಂಕ ಸಿಗಬೇಕು ಪಡೀಬೇಕು ಪಡೆದರೂ ನನ್ನ ಬಳಿ ಇರಬೇಕು ಬರೀ ಅತೃಪ್ತ ಕರಿ ನೆರಳು ಪ್ರೇಮದಾಟದ ತುಂಬಾ ಅನುಮಾನದ ವಿಷ; ಹೇವರಿಕೆ ಹುಟ್ಟಿಸುವ ಕಡು ಭೀತಿ ಆಸೆ ದುರಾಸೆ ಮೈಮನಗಳ ಕಂಪನಕೆ ಬರೀ ಹಸಿವು ದಾಹ ಉದ್ವೇಗ ಉತ್ಕಟತೆ ದೇಹವೆಂದರೆ ...

Read More...