ಹರೀಶ್ ಕೇರ
ಮೂಲತಃ ಪತ್ರಕರ್ತರಾದ ಹರೀಶ್ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್ ಇಂಜಿನಿಯರಿಂಗ್, ಕೆಲಸ ನಿರ್ವಹಿಸುತ್ತಿರುವುದು ಪತ್ರಿಕೆಯಲ್ಲಿ. ಹೊಸದಿಗಂತ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರದ ಪುರವಣಿಗಳ ಮುಖ್ಯಸ್ಥರಾಗಿ ದುಡಿದು ಪ್ರಸ್ತುತ ವಿಜಯಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ಧಾರೆ. ವೃತ್ತಿಯಿಂದ ಪತ್ರಕರ್ತ; ಆದರೆ ಹೃದಯದಲ್ಲಿ ಕತೆ, ಕವಿತೆಗಳಿವೆ. ‘ನಕ್ಷತ್ರ ನೇಯುವ ಹಕ್ಕಿಗಳು’ ಕವನ ಸಂಕಲನ.