Book Watchers

ಹರೀಶ್‌ ಕೇರ

ಮೂಲತಃ ಪತ್ರಕರ್ತರಾದ ಹರೀಶ್‌ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್‌ ಇಂಜಿನಿಯರಿಂಗ್‌, ಕೆಲಸ ನಿರ್ವಹಿಸುತ್ತಿರುವುದು ಪತ್ರಿಕೆಯಲ್ಲಿ. ಹೊಸದಿಗಂತ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರದ ಪುರವಣಿಗಳ ಮುಖ್ಯಸ್ಥರಾಗಿ ದುಡಿದು ಪ್ರಸ್ತುತ ವಿಜಯಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ಧಾರೆ. ವೃತ್ತಿಯಿಂದ ಪತ್ರಕರ್ತ; ಆದರೆ ಹೃದಯದಲ್ಲಿ ಕತೆ, ಕವಿತೆಗಳಿವೆ. ‘ನಕ್ಷತ್ರ ನೇಯುವ ಹಕ್ಕಿಗಳು’ ಕವನ ಸಂಕಲನ.

Articles

ಮಹಾಭಾರತದ ಅಶ್ವತ್ಥಾಮನ ರುದ್ರನಾಟಕವನ್ನ ನೆನಪಿಸುವ `ಅಶ್ವತ್ಥಾಮನ್'

ಒಬ್ಬರಾದ ಮೇಲೊಬ್ಬರಂತೆ ಹಲವು ಹೆಣ್ಣುಗಳನ್ನು ಕೂಡುವ ಅಶ್ವತ್ಥಾಮ, ಮೂವರು ಹೆಂಡತಿಯರ ಮೂಲಕ ಕಂಡುಕೊಳ್ಳುವ ಬದುಕಿನ ಸತ್ಯಗಳು ವಿಲಕ್ಷಣವಾಗಿವೆ. ಕೆಲವೊಮ್ಮೆ ತನ್ನೊಳಗಿನ ಪೂರ್ವಗ್ರಹಗಳನ್ನೂ ಈ ಹೆಣ್ಣುಗಳ ಮೂಲಕವೇ ನಿಜ ಮಾಡುತ್ತ ಹೋಗುತ್ತಿದ್ದಾನೋ ಅಂತಲೂ ಅನ್ನಿಸದೇ ಇರದು. ಎದುರಾಗುವ ಎಲ್ಲ ವ್ಯಕ್ತಿಗಳ ಒಳಗಿನ ಪೊಳ್ಳುತನವನ್ನು ಬಯಲು ಮಾಡುತ್ತ ಹೋಗಲು ಬಯಸುವನು,

Read More...