Book Watchers

ಪ್ರದೀಪ್ ಕೆಂಜಿಗೆ

ಹಲವು ಪುಸ್ತಕಗಳನ್ನು ಬರೆದ ಪ್ರದೀಪ್ ಕೆಂಜಿಗೆ ಅವರು, ಲೇಖಕ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಸೇರಿ ಮಿಲೆನಿಯಮ್ ಸರಣಿ ಮತ್ತು ಪ್ಯಾಪಿಲಾನ್ ಸರಣಿ ಪುಸ್ತಕಗಳು ಬರೆದು/ಅನುವಾದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ 'ಕೆಂಜಿಗೆ' ಇವರ ಊರು. ಅಮೇರಿಕಾದ ಪ್ರಸಿದ್ಧ ಕರಿಯರ ವಿಶ್ವವಿದ್ಯಾಲಯ ಟಸ್ಕ್ಗೀಯಲ್ಲಿ ಪರಿಸರ ವಿಜ್ಞಾನ ಅಭ್ಯಸಿಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದವರೊಡನೆ ಕೆಲಸ ಮಾಡಿದ ಅನುಭವವಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿ ನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿ ಎಚ್ ಡಿ. ಪಡೆದಿದ್ದಾರೆ.

Articles

ಮಲೆನಾಡಿನ ಕೌತುಕ ಕಾಟಿಹರದ ತಿರುವು

ಕೃಷಿ ಬಡವಾಗುತ್ತಿರುವಂತೆ, ಅನಿವಾರ್ಯವಾಗಿ ಮಲೆನಾಡೂ ಬದಲಾಗುತ್ತಿದೆ.ಅಪರಿಚಿತ ಹೆಜ್ಜೆ ಗುರುತುಗಳು ನಿಚ್ಚಳವಾಗಿ, ಹಿಂದಿನ ಮುಗ್ದತೆ  ಮಾಯವಾಗುತ್ತಿದೆ.ಕಾಳದಂಧೆಗಳು, ರೆಸಾರ್ಟ್ಗಳು ,ನಕ್ಸಲರ ಓಡಾಟಗಳು . ಹೀಗೇ ಇವನ್ನೆಲ್ಲ ಹತ್ತಿರದಿಂದ ಗಮನಿಸುತ್ತಾ ಇರುವ ಕಾರ್ತಿಕ್ , ಹಳ್ಳಿ ಬದುಕಿನ ಕಷ್ಟ ,ಕಾರ್ಪಣ್ಯಗಳ ನಡುವೆ ಅವಡು ಕಚ್ಚಿ ಬದುಕುತ್ತಿದ್ದಾರೆ ;ಬರೆಯುತ್ತಿದ್ದಾರೆ .

Read More...