ಮೂಲತಃ ಆಗುಂಬೆ ಸಮೀಪದ ಹಳ್ಳಿಯವರಾದ ಸ್ಕಂದ ಆಗುಂಬೆ, ಪ್ರಸ್ತುತ ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾರೆ. ಓದು, ಬರಹ ಇವರ ಆಸಕ್ತಿಯ ವಿಷಯ.
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಸಹೋದರಿಯ ಅಕಾಲಿಕ ಸಾವನ್ನು ಅರಗಿಸಿಕೊಂಡು, ಬಂಧುಗಳೆನಿಸಿಕೊಂಡವರಿಂದಲೇ ಅವಮಾನಕ್ಕೊಳಗಾಗಿ, ಬದುಕು ತಂದೊಡ್ಡಿದ್ದ ಸಕಲ ರೀತಿಯ ಕಷ್ಟಗಳಿಗೂ ಸಾಕ್ಷಿಯಾಗಿ.. ಕೊನೆಗೆ "ಶಿವಾಸ್" ಎಂಬ ಸಾಮ್ರಾಜ್ಯವನ್ನು ಕಟ್ಟಿದ ಶಿವರಾಮ ಭಂಡಾರಿಯವರ ಜೀವನ ಪಯಣವನ್ನು ಓದುವಾಗ ಮನಸ್ಸು ಭಾರವಾಗುತ್ತಲೇ ಹೋಗುತ್ತದೆ.