About the Author

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ.

ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ಸಾಹಿತಿ : ಚಂದ್ರಶೇಖರ ಕಂಬಾರ, ಇವರೆಲ್ಲರೂ ಭಾರತ ರತ್ನರು, ಭಾಷಣ ಕಲೆ, ವಾತ್ಸಾಯನ ಕಾಮಸೂತ್ರ, ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ, ಅಂಬೇಡ್ಕರ್, 51 ಸರಳ ವಿಜ್ಞಾನ ಪ್ರಬಂಧಗಳು, ಮೋಹನದಾಸ ಕರಮಚಂದ ಗಾಂಧಿ (ಆತ್ಮಕಥೆ), ಯಶಸ್ಸಿನ ಮೆಟ್ಟಿಲುಗಳು, 101 ಪಂಚತಂತ್ರ ಕಥೆಗಳು, ಅಥೆನ್ಸ್ ನ ಟೈಮನ್, ಮರೆತು ಹೋಗಿರುವ ಮಹಾನಗರಗಳು, ನನ್ನ ಕನಸಿನ ಭಾರತ (ಅನುವಾದ), ಜ್ಞಾನಪೀಠ ಪುರಸ್ಕೃತ ಕನ್ನಡದ ಸಾಹಿತಿಗಳು, ಒಂದು ಜೀವನ ಚರಿತ್ರೆ(ಕಥಾ ಸಂಕಲನ), ವಿಶ್ವ ವಿಖ್ಯಾತ ಪುರಾಣಗಳು (ಅನುವಾದ), ಮಹಾರಾಷ್ಟ್ರದ ಜಾನಪದ ಕತೆಗಳು(ಅನುವಾದ), ಬಂಗಾಳದ ಜಾನಪದ ಕಥೆಗಳು(ಅನುವಾದ) ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದಾರೆ.

ಜಿ.ಎಂ. ಕೃಷ್ಣಮೂರ್ತಿ

Books by Author