ಚೆಂಗೀಸ್ ಖಾನ್

Author : ಜಿ.ಎಂ. ಕೃಷ್ಣಮೂರ್ತಿ

Pages 203

₹ 180.00




Year of Publication: 2021
Published by: ಭಾರತೀ ಪ್ರಕಾಶನ
Address: ಸರಸ್ವತೀ ಪುರಂ, ಮೈಸೂರು-570009
Phone: 0821 254 3941

Synopsys

ಕುಖ್ಯಾತ ಬರ್ಬರ ಸಾಮ್ರಾಟನ ಇತಿಹಾಸದ ಕಥನ ಎಂಬ ಉಪಶೀರ್ಷಿಕೆಯಡಿ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ರಚಿಸಿದ ಕೃತಿ-ಚೆಂಗೀಸ್ ಖಾನ್. ಮಂಗೋಲ ಸಾಮ್ರಾಜ್ಯದ ಚಕ್ರಾಧಿಪತಿ ಚೆಂಗೀಸ್ ಖಾನ್, ಮಧ್ಯ ಏಷಿಯಾದ ಬಹಳಷ್ಟು ಪ್ರದೇಶಗಳನ್ನು ಮತ್ತು ಚೀನಾ ದೇಶಾಡಳಿತವನ್ನು ಈತ ಅತಿಕ್ರಮಿಸಿಕೊಂಡಿದ್ದ. ಈಶಾನ್ಯ ಏಷಿಯಾದ ಅನೇಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಒಂದುಗೂಡಿಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಈತನು ತಾನು ಗೆದ್ದ ಎಲ್ಲ ಪ್ರದೇಶಗಳನ್ನು ಮಕ್ಕಳು ಮೊಮ್ಮಕ್ಕಳು ಮಧ್ಯೆ ಹಂಚಿದ. ತಾಂಗೂಟರನ್ನು ಸೋಲಿಸಿದ ನಂತರ (1227) ಆತ ಮರಣ ಹೊಂದಿದ. ಈತನ ಶವವನ್ನು ರಹಸ್ಯ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ಈತನ ಮರಣ ಹೇಗೆ ಸಂಭವಿಸಿತು ಎಂಬ ಬಗ್ಗೆ ಹತ್ತು ಹಲವು ಸಂಶಯಗಳಿವೆ. ತಾಂಗೂಟರು ಯುದ್ಧದಲ್ಲಿ ಈತನನ್ನು ಸಾಯಿಸಿದರೆಂದು, ಕುದುರೆ ಮೇಲೆ ಕುಳಿತಿದ್ದ ಈತ ತಲೆ ಸುತ್ತು ಬಂದು ತೀರಿಕೊಂಡ ಎಂದೂ ಹೇಳಲಾಗುತ್ತದೆ. ಚೆಂಗೀಸ್ ಖಾನ್ ನ ಇಚ್ಛೆಯಂತೆ ಆತನ ಶವವನ್ನು ರಹಸ್ಯ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ಈ ಸಂಗತಿ ಯಾರಿಗೂ ತಿಳಿಯದಂತಿರಲು, ದಾರಿಯಲ್ಲಿ ಸಿಕ್ಕ ಯಾರನ್ನೇ ಆಗಲಿ, ಸೈನಿಕರು ಅವರನ್ನು ಕೊಂದು ಹಾಕಿದರು. ಮಂಗೋಲಿಯಾ ದೇಶವು ಈತನನ್ನು ಮಂಗೋಲ್ ಚಕ್ರಾಧಿಪತ್ಯದ ಪಿತಾಮಹ ಎಂದು ಗೌರವ ನೀಡುತ್ತದೆ. ಇಂತಹ ಚಕ್ರವರ್ತಿಯ ಕುರಿತು ಬರೆದ ಇತಿಹಾಸ ಕಥನವಿದು.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books