ಯಶಸ್ಸಿನ ಮೆಟ್ಟಿಲುಗಳು

Author : ಜಿ.ಎಂ. ಕೃಷ್ಣಮೂರ್ತಿ

₹ 70.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರ ಕೃತಿ-ಯಶಸ್ಸಿನ ಮೆಟ್ಟಿಲುಗಳು. ಯಶಸ್ಸು ಎಂಬುದು ಸಿದ್ಧ ವಸ್ತುವಲ್ಲ; ಅದನ್ನು ಪ್ರಯಾಸಪಟ್ಟು, ಬುದ್ದಿವಂತಿಕೆಯನ್ನು ಮೆರೆದು ಪಡೆದುಕೊಳ್ಳಬೇಕಾದದ್ದು. ಯಶಸ್ಸು ಸಿಗಬೇಕಾದರೆ ಅದಕ್ಕೆ ಮೂಲ ಎಂಬುದು ಶ್ರಮ. ಪ್ರಾಮಾಣಿಕ ಮನಸ್ಸು ಮಾತ್ರ ಯಶಸ್ಸು ಪಡೆಯುತ್ತದೆ. ಒಂದಲ್ಲ ಹತ್ತು ಬಾರಿ ಸೋಲನ್ನು ಅನುಭವಿಸಿದರೂ ಮತ್ತೇ ಮತ್ತೆ ಪ್ರಯತ್ನ ಮಾಡಿದವರಿಗೆ ಮಾತ್ರ ಯಶಸ್ಸು ಸಿಗುತ್ತದೆ. ಆದ್ದರಿಂದ, ಪ್ರಯತ್ನಶೀಲರಿಗೆ ಮಾತ್ರ ಯಶಸ್ಸು ಇದೆ. ಸೋಮಾರಿಗೆ ಅಲ್ಲ. ಸದಾ ಗೆಲುವು ಬಯಸುವುದು ಸರಿಯಲ್ಲ. ಏಕೆಂದರೆ, ಸೋಲು ನಮಗೆ ಗೆಲುವಿಗಿಂತ ಹೆಚ್ಚಿನದನ್ನು ಕಲಿಸಿಕೊಡುತ್ತದೆ. ಯಶಸ್ಸಿಗೆ ಅಡ್ಡ ಮಾರ್ಗಗಳಿಲ್ಲ. ಹಂತ ಹಂತವಾಗಿ ಮೇಲೇರಿದರೆ ಮಾತ್ರ ಯಶಸ್ಸು ಎನ್ನಬಹುದು. ಅಡ್ಡದಾರಿಯಲ್ಲಿ ಹೋದರೆ ಆ ಯಶಸ್ಸು ಶಾಶ್ವತವಲ್ಲ. ಇಂತಹ ಸಲಹೆ-ಸೂಚನೆ-ಎಚ್ಚರಿಕೆಗಳನ್ನು ಒಳಗೊಂಡ ಪ್ರೇರಣಾತ್ಮಕ ಕೃತಿ ಇದು.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books