ಬಸವಣ್ಣ ಮತ್ತು ಅಂಬೇಡ್ಕರ್

Author : ರಂಜಾನ್ ದರ್ಗಾ

Pages 176

₹ 130.00

Buy Now


Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 94802 86844

Synopsys

12ನೇ ಶತಮಾನದ ಕ್ರಾಂತಿಕಾರನೊಬ್ಬನ ಚಿಂತನೆ ಹೇಗೆ 20ನೆ ಶತಮಾನದಲ್ಲಿ ಮತ್ತೆ ಮರು ಹುಟ್ಟು ಪಡೆದು ದೇಶದಲ್ಲಿ ತಳಸ್ತರದ ಜನರಲ್ಲಿ ಆತ್ಮಗೌರವವನ್ನು ಎಚ್ಚರಿಸುತ್ತದೆ ಎನ್ನುವುದನ್ನು ರಂಜಾನ್ ದರ್ಗಾ ಅವರ 'ಬಸವಣ್ಣ ಮತ್ತು ಅಂಬೇಡ್ಕರ್' ಕೃತಿ ವಿವರಿಸುತ್ತದೆ. ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯ ಮೂಲದ್ರವ್ಯದಲ್ಲಿರುವ ಸಾಮ್ಯತೆಯ ಕುರಿತಂತೆ ಗಮನ ಸೆಳೆಯುವುದಷ್ಟೇ ಅಲ್ಲದೆ, ವಚನ ಚಳವಳಿಯ ಕುರಿತಂತೆ ವಿಸ್ತ್ರತ ವಿವರಣೆ ಗಳನ್ನು ಈ ಕೃತಿ ನೀಡುತ್ತದೆ. ಪ್ರಾಚೀನ ಕಾಲದಿಂದ ಒಳಗೊಂಡು ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ದರ್ಗಾ ಅವರು ಅಂಬೇಡ್ಕರ್ ಮತ್ತು ಬಸವಣ್ಣ ಅವರ ಚಿಂತನೆಗಳ ಬೆಳಕಿನಲ್ಲಿ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸುಮಾರು 20 ಲೇಖನಗಳನ್ನು ಕೃತಿ ಒಳಗೊಂಡಿದೆ. ವರ್ತಮಾನಕ್ಕೆ ಬಸವಣ್ಣ ಹೇಗೆ ಪ್ರಸ್ತುತವಾಗುತ್ತಾರೆ, ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯಲ್ಲಿರುವ ಸಾಮ್ಯತೆಗಳು, ಹೇಗೆ ಬಸವಧರ್ಮಕ್ಕೆ ವಿರುದ್ದವಾದ ಮೂಢನಂಬಿಕೆಗಳು ಇದೀಗ ನಮ್ಮ ಸಮಾಜವನ್ನು ಕಾಡುತ್ತಿದೆ, ಜಾತೀಯತೆಯನ್ನು ಬಸವ ಮತ್ತು ಅಂಬೇಡ್ಕರ್ ಮೂಲಕ ಹೇಗೆ ಎದುರಿಸಬಹುದು ಎನ್ನುವುದನ್ನು ಚರ್ಚಿಸುವ ಬೇರೆ ಬೇರೆ ಲೇಖನಗಳು ಈ ಕೃತಿಯಲ್ಲಿದೆ.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books