ಧರ್ಮಸ್ಥಳದ ಜೀವಸೆಲೆ ಹೇಮಾವತಿ

Author : ರಾಜ್ಯಶ್ರೀ ಎಚ್.ಎನ್

Pages 290

₹ 150.00




Year of Publication: 2018
Published by: ಸುವರ್ಣ ಮಹೋತ್ಸವ ಆಚರಣಾ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಯವ ಪುಸ್ತಕ ಮಾಲಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ.

Synopsys

ಧರ್ಮಸ್ಥಳದ ಬೀಡಿನ ಮನೆತನಕ್ಕೆ ಸೊಸೆಯಾದ ಹೇಮಾವತಿ ಹೆಗ್ಗಡೆಯವರ ವೈವಾಹಿಕ ಜೀವನದ ಕುರಿತ ವಿಚಾರಗಳನ್ನು ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ, ಲೇಖಕಿ ರಾಜ್ಯಶ್ರೀ ಎಚ್. ಎನ್‌. ಹೇಮಾವತಿ ವೀ. ಹೆಗ್ಗಡೆಯವರು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡುಂಡ ಕೂಡುಕುಟುಂಬದ ಬಾಳು ಬದುಕನ್ನು ಚಿತ್ರಿಸಿದುದರ ಕುರಿತಾಗಿ ಇಂದಿನ ತಲೆಮಾರಿಗೆ ಅಗತ್ಯವಾಗಿ ಹೇಳಬೇಕಾದ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ತಮ್ಮ ಅರ್ಧಾಂಗಿ ಹೇಮಾವತಿ ಹೆಗ್ಗಡೆಯವರ ಸಾಂಸಾರಿಕ , ವ್ಯಾವಹಾರಿಕ, ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಚಿತ್ರಣವನ್ನು ಈ ಪುಸ್ತಕದ ಮುಖೇನ ತಿಳಿಸಿದ್ದಾರೆ. ಸುಖ ಸಂತೋಷಗಳಿರುವುದು ಹೊಸ ಹೊಸ ಸಾಧನ ಸಂಪತ್ತುಗಳಿಂದಲ್ಲ. ಅದಿರುವುದು ಸಹಬಾಳ್ವೆಯ , ಸೌಹಾರ್ದದ ಸಂತೃಪ್ತಿಯಲ್ಲಿ ಎಂದು ತಿಳಿಯಬೇಕಾದರೆ ಹೊಸ ತಲೆಮಾರು ಹೇಮಾವತಿ ವೀ. ಹೆಗ್ಗಡೆಯವರ ಎಳೆಯಬಾಳಿನ ಜೀವನೋಲ್ಲಾಸದ ವಿವರಗಳನೊಮ್ಮೆ ಓದಬೇಕು ಎಂದು ಮುನ್ನುಡಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿವರಿಸಿದ್ದಾರೆ.

About the Author

ರಾಜ್ಯಶ್ರೀ ಎಚ್.ಎನ್

ಕವಿ, ಲೇಖಕಿ ಹಾಗೂ ಉತ್ತಮ ವಾಗ್ಮಿಯಾಗಿರುವ ರಾಜ್ಯಶ್ರೀ ಎಚ್.ಎನ್  ಅವರು ಬಿ.ಎಸ್.ಸಿ, ಡಿಪ್ಲಮಾ-ಇನ್-ಕಂಪ್ಯೂಟರ್, ಹಾಗೂ ಎಂ.ಎ ಪದವಿದರರು. ಭಾರತೀಯ ಜೀವವಿಮಾ ನಿಗಮದಲ್ಲಿ ಕೆಲಸಮಾಡುತ್ತಿರುವ ಇವರು ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.ಏಕಪಾತ್ರಾಭಿನಯದಲ್ಲಿ ರಾಜ್ಯ ಪ್ರಶಸ್ತಿ  ವಿಜೇತೆಯಾಗಿರುವ ರಾಜ್ಯಶ್ರೀ ದೂರದರ್ಶನದಲ್ಲಿ ನೂರಕ್ಕೂ ಹೆಚ್ಚು ಸಂದರ್ಶನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಾಡುವ ನೆನಪುಗಳು ಇವರ ಎರಡನೆಯ ಸಂಕಲನ. ಮೊದಲನೆ ಸಂಕಲನ ಅರ್ಥ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಜನಪ್ರಿಯ ಜನರಲ್ ಮೇನೇಜರ್ ವಿ.ನವರತ್ನರಾಜು ಕುರಿತು ಜಿವನ ಚರಿತ್ರೆ ಬರೆದಿದ್ದು ಇದೊಂದು ಗದ್ಯಗ್ರಂಥವಾಗಿದೆ. ರಾಜ್ಯಶ್ರೀ ಅವರು ಹಿರಿಯ ಸಾಹಿತಿಗಳು ಹಾಗೂ ನಾಡೋಜ ದಂಪತಿಗಳಾದ ಪ್ರೊ.ಕಮಲಾ-ಹಂಪನಾ ಅವರ ...

READ MORE

Related Books