ಯಕ್ಷ ಸುವರ್ಣ

Author : ಎಂ. ಪ್ರಭಾಕರ ಜೋಷಿ

Pages 288

₹ 150.00




Year of Publication: 2018
Published by: ಸುವರ್ಣ ಮಹೋತ್ಸವ ಆಚರಣಾ ಸಮಿತಿ
Address: ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆ, ಶ್ರೀಕ್ಷೇತ್ರ ಧರ್ಮಸ್ಥಳ

Synopsys

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ 16ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಲೇಖಕರಾದ ಡಾ. ಎಂ. ಪ್ರಭಾಕರ ಜೋಶಿ ಹಾಗೂ ಉಜಿರೆ ಎನ್. ಅಶೋಕ ಭಟ್ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಯಕ್ಷ ಸುವರ್ಣ, ಪೂಜ್ಯ ಹೆಗ್ಗಡೆಯವರ ಸಂದರ್ಶನ, ಪೂಜ್ಯ ಹೆಗ್ಗಡೆಯವರ ಆಸಕ್ತಿ-ವಿಮರ್ಶೆ-ಸ್ವಾರಸ್ಯ, ಪೂಜ್ಯ ಹೆಗ್ಗಡೆಯವರ ಅನುಸರಣೀಯ ಉಪಕ್ರಮ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಲೇಖನಿಯಿಂದ, ಪೂಜ್ಯರ ಅನುಭವ ಕಥನ, ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಅಭಿಮತ, ದೊಡ್ಡಮ್ಮ ಕಲಾವಿದರ ಮಾತೃಶ್ರೀಯವರು, ಜವಾಬ್ದಾರಿ-ಆತಂಕ-ಸಂತೋಷ-ಸಾರ್ಥಕ್ಯ, ಡಿ. ಹರ್ಷೇಂದ್ರ ಕುಮಾರ್-ಸಂದರ್ಶನ ಸಾರಾಂಶ, ಶ್ರೀಧರ್ಮಸ್ಥಲ ಸಣ್ಣಮೇಳ, ಯಕ್ಷಗಾನ ತಾಳಮದ್ದಳೆಗೆ ಘೋಷಣೆ, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೇಗಳಲ್ಲಿ ಯಕ್ಷಗಾನ ಸೇರಿದಂತೆ ಒಟ್ಟು 26 ಅಧ್ಯಾಯಗಳ ಒಳಗೊಂಡಿವೆ. ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಅವರು ಕೃತಿಗೆ ಮುನ್ನುಡಿ ಬರೆದು ‘ಮೈಸೂರಿನ ಮಹಾರಾಜರು ನಮ್ಮ ಆಸ್ಥಾನದ ಆಟದ ಮೇಳಕ್ಕೆ ಭಾಗವತರು ಹಾಗೂ ವಿವಿಧ ವಿಭಾಗಗಳ ಕಲಾವಿದರನ್ನು ಕಳುಹಿಸಿಕೊಡಬೇಕೆಂದು ಧರ್ಮಸ್ಥಳದ ಆಗಿನ ಹೆಗ್ಗಡೆಯವರಲ್ಲಿ ಕೋರಿಕೆಯಿಡುತ್ತಾರೆಂದರೆ ಆ ಕಾಲದ ಆಟದ ಗುಣಮಟ್ಟ ಎಂತಹದ್ದು ಆಗಿತ್ತೆಂಬುದು ಸ್ಪಷ್ಟವಾಗುತ್ತದೆ. ಆಟದ ಗುಣ ಮೇಲ್ಮೆಗೂ ಧರ್ಮಸ್ಥಳ ಮೇಳಕ್ಕೆ ಭವ್ಯ ಪರಂಪರೆ ಉಂಟೆಂಬುದೂ ಹೀಗೆ ಸುವ್ಯಕ್ತ.’ಹೆಗ್ಗಡೆ ಕುಟುಂಬದವರ ಸಂದರ್ಶನಗಳಲ್ಲಿ ಮೇಳದ ಬಗೆಗಗೆ ಬಹುವಾದ ಮಾಹಿತಿಗಳು, ಅವರ ಕಾಳಜಿಗಳು ವ್ಯಕ್ತವಾಗಿವೆ. ಅಲ್ಲದೇ ಆಟದ ನಿಯಮಾವಳಿ, ಮೇಳದ ವಿಶೇಷತೆಗಳು ಕಲಾಕಾರರ ಸೇವಾವಧಿ, ಪ್ರಸಾದನ ಸಾಮಗ್ರಿಗಳ ರಚನೆಯ ಶಿಲ್ಪಿಗಳು ಸಹಾಯಕ ಸಿಬ್ಬಂದಿಯ ವಿವರ ಇತ್ಯಾದಿ ಒಳಗೊಂಡ ಮಾಹಿತಿ ಸಮಗ್ರತೆ ಒದಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎಂ. ಪ್ರಭಾಕರ ಜೋಷಿ

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...

READ MORE

Related Books