ಹಂಪಿಯಿಂದ ಹರಪ್ಪಾದವರೆಗೆ

Author : ಆರ್. ಶೇಷಶಾಸ್ತ್ರಿ



Year of Publication: 2009
Published by: ಸಾಹಿತ್ಯ ಅಕಾಡೆಮಿ

Synopsys

ಆರ್. ಶೇಷಶಾಸ್ತ್ರಿ ಅವರು ಅನುವಾದಿಸಿರುವ ಆತ್ಮಕಥಾ ಸಂಕಲನ ಹಂಪಿಯಿಂದ ಹರಪ್ಪಾದವರೆಗೆ. 2001ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತೆಲುಗಿನ ಮೊದಲ ಆತ್ಮ ಕಥೆ ಇದು. ತಿರುಮಲ ರಾಮಚಂದ್ರ (೧೯೧೩ ೧೯೯೭) ಆಂಧ್ರ ಪ್ರದೇಶದ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು. ಅವರ ಇಡೀ ಬದುಕೇ ಒಂದು ಕೊನೆ ಇಲ್ಲದ ಹುಡುಕಾಟ. ಹುಟ್ಟಿದ್ದು ಹಂಪಿಯಲ್ಲಿ, ವಿದ್ಯಾಭ್ಯಾಸಕ್ಕಾಗಿ ಅಲೆದಾಡಿದ ಪ್ರದೇಶಗಳು ಆನೆಗೊಂದಿ, ತಿರುಪತಿ, ನೆಲ್ಲೂರು, ಚೆನ್ನೈ.. ವಿದ್ಯಾಭ್ಯಾಸ ಪೂರ್ಣ ಗೊಳಿಸಲೆ ಇಲ್ಲ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡರು. ತಿರುಚಿನಾಪಳ್ಳಿ ಜೈಲಿನಲ್ಲಿ ಇದ್ದರು. ಕ್ರಾಂತಿಕಾರಿ ಗಳ ಜೊತೆಗೂ ಸಂಪರ್ಕ ಉಂಟಾಗಿ ಸರಕಾರದಿಂದ ತುಂಬಾ ಕಿರುಕುಳಕ್ಕೆ ಒಳಗಾದರು. ಸಂಸ್ಕೃತದಲ್ಲಿ ಪ್ರಾವೀಣ್ಯತೆ ಇದ್ದ ಕಾರಣ ಪುರಾತನ ಗ್ರಂಥಗಳ ಅಭ್ಯಾಸ ಮಾಡುವ, ಅನುವಾದ ಮಾಡುವ ಕೆಲಸ ಅವರದಾಯಿತು. ಚೆನ್ನೈ, ತಂಜಾವೂರು, ಲಾಹೋರ್ ಗಳಲ್ಲಿ ಕೆಲಸ ಮಾಡಿದರು. ಸ್ವಲ್ಪ ಕಾಲ ಅಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಬಲೂಚಿಸ್ತಾನದ ಚಮನ್ ಮತ್ತು ಕ್ವೆಟ್ಟ ನಗರಗಳಲ್ಲಿ ಇದ್ದರು. ಅಲ್ಲಿಂದ ವಾಪಸ್ ಬರುವಾಗ ಮೊಹೆಂಜೋದಾರೋ ಮತ್ತು ಹರಪ್ಪ ಭೇಟಿ ಕೂಡ ಆಯಿತು. ಹಂಪಿಯಿಂದ ಹರಪ್ಪಾದವರೆಗೆ , ಅವರ ಈ ಆತ್ಮಕಥೆ ಅವರ ಜೀವನದ ಮೊದಲ 30 ವರ್ಷಗಳ ಕಥೆ ಹೇಳುತ್ತದೆ.

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books