ಕನಸುಗಳಿಗೆ ರೆಕ್ಕೆ ಕಟ್ಟಿದವರು

Author : ಭೀಮಣ್ಣ ಗಜಾಪುರ

Pages 164

₹ 175.00




Year of Publication: 2012
Published by: ಕಾವ್ಯ ಪ್ರಕಾಶನ
Address: ಕೆ.ಗಾಜಾಪುರ, ಕೊಡ್ಲಿಗಿ ತಾಲ್ಲೂಕು, ಬಳ್ಳಾರಿ. 583134
Phone: 9008278034

Synopsys

ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾದ ನುಡಿಚಿತ್ರಗಳ, ಲೇಖನಗಳ ಸಂಗ್ರಹ. ಇಲ್ಲಿ ನಮ್ಮ ನಾಡಿನ ಹಳ್ಳಿಗಾಡಿನ ಬದುಕಿನ ಮೌಲ್ಯಗಳು, ಮರೆಯಾಗುತ್ತಿರುವ ಆಚರಣೆಗಳು, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವವರ, ವಿವಿಧ ಸ್ಮಾರಕಗಳ, ಮರೆಯಾಗುತ್ತಿರುವ ಆಚರಣೆಗಳ, ವೈಜ್ಞಾನಿಕ ಯುಗದಲ್ಲಿ ಅಚ್ಚರಿಗೆ ಕಾರಣವಾದ ಸ್ಥಳಗಳ ಕುರಿತು ಕುತೂಹಲ ಮೂಡಿಸುವ ಜ್ಞಾನದ ಸರಕು ಇದೆ. 

About the Author

ಭೀಮಣ್ಣ ಗಜಾಪುರ
(25 July 1977)

ಪತ್ರಕರ್ತ, ಬರಹಗಾರ ಭೀಮಣ್ಣ ಗಜಾಪುರ ಅವರು ಜನಿಸಿದ್ದು 1977 ಜುಲೈ 25ರಂದು. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಜಾಪುರದವರು. ಇವರು ಪ್ರಸ್ತುತ ಕೊಟ್ಟೂರಿನಲ್ಲಿ ನೆಲೆಸಿದ್ದಾರೆ. ಕಳೆದ ಎರಡು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಭೀಮಣ್ಣ ಅವರ ಪ್ರಮುಖ ಕೃತಿಗಳೆಂದರೆ ಬಯಲು ಸೀಮೆಯ ರೈತರ ಯಶೋಗಾಥೆಗಳು, ಕೊಟ್ಟೂರ ದೊರೆ, ಸದ್ಧರ್ಮ ಸುಧೆ, ಬಿಸಿಲು ಬಸಿರು, ನೋವಿನ ಬಣ್ಣಗಳು, ಕನಸುಗಳಿಗೆ ರೆಕ್ಕೆ ಕಟ್ಟಿದವರು ಇವರ ಪ್ರಮುಖ ಕೃತಿಗಳಾಗಿವೆ.   ...

READ MORE

Related Books