ಪ್ರಗತಿಶೀಲತೆ

Author : ಎಚ್.ಎಸ್. ರಾಘವೇಂದ್ರರಾವ್

Pages 100

₹ 10.00




Year of Publication: 1990
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು - 560002

Synopsys

ಲೇಖಕ ಎಚ್. ಎಸ್. ರಾಘವೇಂದ್ರರಾವ್ ಸಂಪಾದಿಸಿರುವ ’ಪಗತ್ರಿಶೀಲತೆ’ ಕೃತಿಯು ಕನ್ನಡ ಸಾಹಿತ್ಯದಲ್ಲಿನ ಪ್ರಗತಿಶೀಲತೆಯ ವಿಕಾಸ, ಪ್ರಗತಿಶೀಲ ಸಾಹಿತ್ಯ ಚಳವಳಿಯ ಪರಿಚಯಗಳನ್ನು ಸ್ಥೂಲವಾಗಿ ಪರಿಚಯಿಸುತ್ತದೆ.

ಕನ್ನಡ ಸಾಹಿತ್ಯದ ಮೊದಲ ದಿನಗಳಿಂದಲೂ ವಸ್ತು ಸ್ಥಿತಿಯನ್ನು ಕುರಿತ ಅಸಹನೆ ಮತ್ತು ಪರಿವರ್ತನೆಯನ್ನೂ ಕುರಿತ ಒಲವುಗಳು ಬೇರೆ ಬೇರೆ ನೆಲೆಯಲ್ಲಿ  ವ್ಯಕ್ತವಾಗುತ್ತಲೇ ಬಂದಿವೆ. ಭಾರತೀಯ ಸಾಹಿತ್ಯಿಕ ಸನ್ನಿವೇಶದಲ್ಲಿ ಮತ್ತು ಅದಕ್ಕೆ ಹಿನ್ನೆಲೆಯಾಗಿ ಯುರೋಪಿನಲ್ಲಿ ಜನಪರವಾದ ಸಾಹಿತ್ಯಿಕ ಚಳವಳಿಗಳು ಆಶಯ ಹಾಗೂ ಮಾಧ್ಯಮವನ್ನು ಕುರಿತಂತೆ ತಳೆದಿರುವ ನಿಲುವುಗಳ ಸ್ಥೂಲ ಗ್ರಹಿಕೆಗಳ ಬಗ್ಗೆ ಕುರಿತು ಚರ್ಚಿಸುವ ಅನೇಕ ಅಂಶಗಳು ’ಪ್ರಗತಿಶೀಲತೆ’ಯಲ್ಲಿ ಕಾಣಬಹುದು.

ಪ್ರಗತಿಯ ಅರ್ಥ ಮತ್ತು ಸಾಧ್ಯತೆಗಳನ್ನು ಕುರಿತ  ಚಿಂತನೆಯು ಸಾಮಾಜಿಕವಾದುದು. ಪ್ರಗತಿಯನ್ನು ಕುರಿತ ಈ ಬಗೆಯ ಆಲೋಚನೆಗಳು ಅದರ ಸಾಮಾಜಿಕ ಹಾಗೂ ವೈಯಕ್ತಿಕ ಆಯಾಮಗಳನ್ನು ಒಂದೆಡೆ ಪರಿಶೀಲಿಸುವುದರಿಂದ ಸಾಕಷ್ಟು ಮಹತ್ವಪೂರ್ಣ ಅಂಶಗಳ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಬಹುದಾಗಿದೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books