ವಾಗರ್ಥ

Author : ಎಂ. ಪ್ರಭಾಕರ ಜೋಷಿ

Pages 118

₹ 42.00




Year of Publication: 1998
Published by: ಕರ್ನಾಟಕ ಸಂಘು, ಪುತ್ತೂರು
Address: ಪುತ್ತೂರು, ದಕ್ಷಿಣ ಕನ್ನಡ- 574202

Synopsys

ಲೇಖಕ ಎಂ. ಪ್ರಭಾಕರ ಜೋಶಿ ಅವರ ಕೃತಿ ʻವಾಗರ್ಥʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ಯಕ್ಷಗಾನ ಕಲೆಯ ವಿವಿಧ ವಿಷಯಗಳ ಕುರಿತು ನಾನು ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿವೆ. ಈ ಸಂಗ್ರಹದ ಹೆಚ್ಚಿನ ಲೇಖನಗಳು ಯಕ್ಷಗಾನದ ಅರ್ಥಗಾರಿಕೆಗೆ ಅರ್ಥಾತ್‌ ಮಾತುಗಾರಿಕೆಗೆ ಸಂಬಂಧಿಸಿವೆ. ಹೀಗೆ ಮೌಖಿಕ ಕಲೆಯೊಂದರ ವಾಕ್‌ ಅರ್ಥಗಳ ವಿಶ್ಲೇಷಣೆಯನ್ನೊಳಗೊಂಡಿವೆ. ಅದಕ್ಕಾಗಿ ಮಹಾಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ ಮೊದಲ ಶಬ್ದವಾಗಿ ಬಳಸಿ ಅಮರಗೊಳಿಸಿದ 'ವಾಗರ್ಥ' ಎಂಬುದನ್ನು ಇದಕ್ಕೆ ಹೆಸರಾಗಿ ಬಳಸಿದ್ದೇನೆ”.

About the Author

ಎಂ. ಪ್ರಭಾಕರ ಜೋಷಿ

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...

READ MORE

Related Books